ಬೆಂಗಳೂರಲ್ಲಿ ಮಳೆ, ವಿಕೇಂಡ್ ಮಸ್ತಿಗೆ ಬ್ರೇಕ್
ಬೆಂಗಳೂರು, ಅ. 19 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಶನಿವಾರ ಸಂಜೆ ಮಳೆಯಾಗುತ್ತಿದ್ದು, ವಿಕೇಂಡ್ ಮಸ್ತಿಯ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ ಸುರಿಯುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ.
ಶನಿವಾರ ಸಂಜೆ ಬೆಂಗಳೂರಿನಲ್ಲಿ ಭಾರೀ ಗಾಳಿ ಸಹಿತಿ ಮಳೆಯಾಗಿದೆ. ಚಾಮರಾಜಪೇಟೆ, ಬಸವನಗುಡಿ, ವಿಜಯನಗರ, ಚಂದ್ರಾಲೇಔಟ್, ಜೆ.ಪಿ.ನಗರ, ಜಯನಗರ, ಶೇಷಾದ್ರಿಪುರಂ, ಕೋರಮಂಗಲ ಮುಂತಾದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.
ಸಕಲ
ಸಮಸ್ಯೆಗಳ
ಪರಿಹಾರಕ್ಕೆ
ಬಳಸಿ
ಬಿಬಿಎಂಪಿ
ಆಪ್
ಸಂಜೆಯ ವೇಳೆಗೆ ಮಳೆ ಸುರಿದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲವು ಬಡಾವಣೆಗಳಲ್ಲಿ ಮರಗಳು ಧರೆಗುರುಳಿದ್ದು ಬಿಬಿಎಂಪಿ ಸಹಾಯವಾಣಿಗೆ ಕರೆ ಹೋಗಿದೆ. ಮೋಡ ಕವಿವ ವಾತಾವರಣ ಮುಂದುವರೆದಿದ್ದು, ತುಂತುರು ಮಳೆಯಾಗುತ್ತಲೇ ಇದೆ.
In Pics: 'ಸ್ವಾತಂತ್ರ್ಯ'ದ ಸವಿ ಕಸಿದ ಬೆಂಗಳೂರು ಮಳೆ
Respected nrupathunga road users tree uprooted near st Martha's hospital blocking the entire road pl use alternate road and reach safely pic.twitter.com/fjmnpt9Sdz
— BTP (@blrcitytraffic) August 19, 2017
ಭಾರೀ ಮಳೆ, ಗಾಳಿಯಿಂದಾಗಿ ನೃಪತುಂಗಾ ರಸ್ತೆಯಲ್ಲಿ ಮರವೊಂದು ಧರೆಗುರುಳಿದೆ. ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿಯೂ ವಾಹನ ಸಂಚಾರ ಮಂದಗತಿಯಲ್ಲಿದೆ.
ಸಿಡಿಲು ಬಡಿದು ರಸ್ತೆ ಬದಿಯೇ ಯುವಕ ಸಾವು
ಅಲಿಯಾಸ್ ನಗರದಲ್ಲಿ ಕಾರುಗಳ ಮೇಲೆ ಮರ ಬಿದ್ದಿದೆ. ಜೆ.ಪಿ.ನಗರ, ಆರ್.ವಿ.ಕಾಲೇಜು ರಸ್ತೆ, ಸಂಜಯನಗರ ಮುಂತಾದ ಕಡೆ ರಸ್ತೆಯ ಮೇಲೆ ನೀರು ತುಂಬಿಕೊಂಡಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
Please avoid nrupatunga road a tree uprooted due to rain pic.twitter.com/1tOKWQIiAs
— Halasur Gate Traffic (@HalasurGatetrf) August 19, 2017