ನಮ್ಮ ಮೆಟ್ರೋ ನಿಲ್ದಾಣಕ್ಕೆ ನಾರಾಯಣಗುರುಗಳ ಹೆಸರು?
ಬೆಂಗಳೂರು, ಸೆಪ್ಟೆಂಬರ್ 17 : 'ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ನಮ್ಮ ಮೆಟ್ರೋ ನಿಲ್ದಾಣಕ್ಕೆ ಇಡುವ ಬಗ್ಗೆ ತೀರ್ಮಾನ ಕೈಗೊಳ್ಳಾಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ
ವಿಧಾನಸೌಧದ
ಬ್ಯಾಂಕ್ವೆಟ್
ಹಾಲ್ನಲ್ಲಿ
ಬ್ರಹ್ಮಶ್ರೀ
ನಾರಾಯಣಗುರುಗಳ
ಜಯಂತಿ
ಉದ್ಘಾಟಿಸಿ
ಮಾತನಾಡಿದ
ಮುಖ್ಯಮಂತ್ರಿಗಳು,
'ಸಾಮಾಜಿಕ,
ಶೈಕ್ಷಣಿಕ,
ಧಾರ್ಮಿಕ
ಮತ್ತು
ರಾಜಕೀಯ
ವಿಚಾರಗಳನ್ನು
ಮುಂದಿಟ್ಟುಕೊಂಡು
ಸಮಾಜದಲ್ಲಿ
ಬದಲಾವಣೆ
ತರಲು
ಶ್ರಮಿಸಿದವರು
ನಾರಾಯಣ
ಗುರುಗಳು'
ಎಂದರು.[ಸರ್ಕಾರದಿಂದಲೇ
ನಾರಾಯಣ
ಗುರು
ಜಯಂತಿ
ಆಚರಣೆ]
'ಗುರುಗಳ ಸಂದೇಶವನ್ನು ಸಮಾಜದ ಎಲ್ಲರಿಗೂ ತಲುಪಿಸುವುದಕ್ಕಾಗಿಯೇ ಈ ಕಾರ್ಯಕ್ರಮ ಅಯೋಜಿಸಲಾಗಿದೆ. ಮಂಗಳೂರು ವಿವಿಯಲ್ಲಿ ಸರ್ಕಾರ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆ ಮಾಡಿದೆ' ಎಂದು ತಿಳಿಸಿದರು.[ನಾರಾಯಣ ಗುರುಗಳ ಬಗ್ಗೆ ಓದಿ]
'ಯಾವುದೇ ಸಮಾಜ ಅಥವಾ ಜಾತಿಯಲ್ಲಿ ಚಲನಶೀಲತೆ ಇರಬೇಕು. ಜಡತ್ವದಿಂದ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ನಾರಾಯಣ ಗುರುಗಳು ಜಾತ್ಯಾತೀತ ಸಮಾಜದ ಪರವಾಗಿ ಇದ್ದವರು. ಶಿಕ್ಷಣದ ಮೂಲಕ ಜ್ಞಾನವಂತರಾಗಿ, ಸಂಘಟನೆ ಮೂಲಕ ಬಲಾಢ್ಯರಾಗಿ ಎಂದು ಹೇಳಿದವರು ನಾರಾಯಣ ಗುರುಗಳು' ಎಂದರು.
'ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣವೊಂದಕ್ಕೆ ನಾರಾಯಣ ಗುರುಗಳ ಹೆಸರಿಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.
ನಾರಾಯಣ ಗುರುಗಳು ಯಾರು? : ಕೇರಳದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರುಗಳು ಸಮಾಜಕ ಸುಧಾರಕರಾಗಿ ಉದಯಿಸಿದರು. ತಮ್ಮ ಸಂಪೂರ್ಣ ಜೀವನವನ್ನು ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಮುಡಿಪಾಗಿಟ್ಟರು.