ಕಣ್ಣಿನ ಸುರಕ್ಷತಾ ಸಲಹೆಗಾಗಿ 'ವಿಶ್ವದೃಷ್ಟಿ ದಿನ'
ಬೆಂಗಳೂರು, ಅಕ್ಟೋಬರ್, 07 : ಕಣ್ಣು ಮಾನವನ ಸೂಕ್ಷ್ಮಾತಿಸೂಕ್ಷ್ಮ ಅಂಗ. ಇದು ಕೊಂಚ ಮಸುಕಾದರೂ ಸಾಕು ಮಾನವನಿಗೆ ಏನೋ ಕಳೆದುಕೊಂಡಂತೆ ಭಾಸವಾಗಲು ಶುರುವಾಗುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸರ್ಕಾರವು 'ವಿಶ್ವ ದೃಷ್ಟಿ ದಿನ-2015' ಆಚರಿಸಲು ನಿರ್ಧರಿಸಿದೆ.
ವಿಶ್ವದೃಷ್ಟಿ ದಿನವನ್ನು 'ವಿಷನ್ 2020 : ದ ರೈಟ್ ಟು ಸೈಟ್-ಇಂಡಿಯಾ' ಎಂಬ ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 8ರ ಬೆಳಿಗ್ಗೆ 7.30 ರಿಂದ 9 ಗಂಟೆವರೆಗೆ ಕಬ್ಬನ್ ಪಾರ್ಕ್ ಬಳಿಯ ಪ್ರೆಸ್ ಕ್ಲಬ್ ನಲ್ಲಿ ಆಚರಿಸಲಾಗುತ್ತಿದೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವರಾದ ಯುಟಿ ಖಾದರ್ ಆಗಮಿಸಲಿದ್ದಾರೆ.[ಕಬ್ಬನ್ ಪಾರ್ಕಿನಲ್ಲಿ 1 ಕಪ್ ಕಾಫಿಗೆ 100 ರು]
ದಿನದಿಂದ ದಿನಕ್ಕೆ ದೃಷ್ಟಿ ದೋಷ ಹಾಗೂ ಹುಟ್ಟು ಕುರುಡಿಗೆ ಒಳಗಾಗುವವರ ಸಂಖ್ಯೆ ಅಧಿಕವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಸಲ್ಲಿಸಿದ 2010ರ ವರದಿಯ ಪ್ರಕಾರ 285 ಮಿಲಿಯನ್ ಜನರು ದೃಷ್ಟಿದೋಷಕ್ಕೆ ತುತ್ತಾಗಿದ್ದಾರೆ. 39 ಮಿಲಿಯನ್ ಜನ ಕುರುಡುತನಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿ 80% ರಷ್ಟು ಕುರುಡರಿದ್ದಾರೆ ಎಂದು ಹೇಳಿದೆ
ಹೆಚ್ಚಿನ ಮಾಹಿತಿಗಾಗಿ ಶ್ರೀದೇವಿ ಸುಂದರ್ ರಾಜನ್ 9999454312/ 9811604312 ಹಾಗೂ ಕಾರ್ಯಕ್ರಮ ಅಧಿಕಾರಿಯಾದ ಡಾರ್ವಿನ್ ಮೋಸಸ್ 9986978550 ಸಂಪರ್ಕಿಸಬಹುದು.