ವಾರಾಂತ್ಯದಲ್ಲಿ ಕಾರ್ನಾಡರ ತುಘಲಕ್ ತಪ್ಪದೇ ನೋಡಿ
ಬೆಂಗಳೂರು, ನ.21: ಭಾರತದ ಶೇಷ್ಠ ನಾಟಕಗಳಲ್ಲೊಂದಾದ ಗಿರೀಶ್ ಕಾರ್ನಾಡರ 'ತುಘಲಕ್'ಒಂದು ವರ್ಷದಲ್ಲಿ ಮೂವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. 'ಸಮುದಾಯ' ಹವ್ಯಾಸಿ ರಂಗ ತಂಡ 35 ಮತ್ತು 36 ನೇ ಪ್ರದರ್ಶನಗಳನ್ನು ಇದೇ ಶನಿವಾರ 22/11/2014 ರಂದು ರಂಗ ಶಂಕರದಲ್ಲಿ ನೀಡಲಿದೆ.
ಕಳೆದ
ವರ್ಷ
ಅಕ್ಟೋಬರ್
ನಲ್ಲಿ
ರಂಗಶಂಕರದಲ್ಲಿ
ನಡೆದ
ಕಾರ್ನಾಡ
ನಾಟಕಗಳ
ಉತ್ಸವದಲ್ಲಿ
ಎಂಟು
ಭಾಷೆಗಳಿಂದ
ಎಂಟು
ನಾಟಕಗಳು
ಪ್ರದರ್ಶಿಸಲ್ಪಟ್ಟಿದ್ದು,
'ಸಮುದಾಯ'
ಬೆಂಗಳೂರು
ಕನ್ನಡದಲ್ಲಿ
'ತುಘಲಕ್'
ನಾಟಕವನ್ನು
ಆಯ್ಕೆ
ಮಾಡಿಕೊಂಡಿತ್ತು.
ಅಕ್ಟೋಬರ್
18,
2013
ರಂದು
ಮೊದಲ
ಪ್ರದರ್ಶನ
ಕಂಡ
ತುಘಲಕ್
ನಾಟಕವು,
ಒಂದು
ವರ್ಷದಲ್ಲಿ,
ಬೆಂಗಳೂರು
ಸೇರಿದಂತೆ
ಮೈಸೂರು,
ಧಾರವಾಡ,
ಶಿರಸಿ,
ಮಂಗಳೂರು,
ಉಡುಪಿ,ಗೌರಿಬಿದನೂರು,
ಕೋಲಾರ
ಮುಂತಾದ
ಜಿಲ್ಲಾ
ಕೇಂದ್ರಗಳಲ್ಲಿ
ಪ್ರದರ್ಶನ
ನೀಡಿತ್ತು.
ಒಂದು ವರ್ಷದಲ್ಲಿ 36 ಪ್ರದರ್ಶನಗಳನ್ನು ಒಂದು ಹವ್ಯಾಸಿ ರಂಗತಂಡ ನೀಡಿರುವ ಉದಾಹರಣೆಗಳು ಕನ್ನಡ ರಂಗಭೂಮಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬಂದಿಲ್ಲ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವೆಡೆ ತುಘಲಕ್ ನಾಟಕವು ತುಂಬಿದ ಸಭಾಂಗಣವನ್ನು ಕಂಡಿರುವುದು ನಮಗೆ ಹೆಗ್ಗಳಿಕೆಯಾದರೆ, ಈ ಪ್ರಯೋಗದ ಜನಪ್ರಿಯತೆಯ ಸಾಕ್ಷಿಯೂ ಆಗಿದೆ. [ತುಘಲಕ್ 25ನೇ ದರ್ಬಾರ್ ವಿಶೇಷ]
ಅಷ್ಟೇ
ಅಲ್ಲದೇ,
ರಾಷ್ಟ್ರೀಯ
ನಾಟಕ
ಶಾಲೆ
(NSD)
ನಡೆಸುವ
ಅಂತರ
ರಾಷ್ಟ್ರೀಯ
ನಾಟಕ
ಉತ್ಸವವಾದ,
17ನೇ
ಭಾರತ
ರಂಗ
ಮಹೋತ್ಸವದಲ್ಲಿ
ಆಯ್ಕೆಯಾದ
ಏಕೈಕ
ಕನ್ನಡ
ನಾಟಕ
ಎಂಬುದು
ಹೆಮ್ಮೆಯ
ವಿಷಯ.
ಇದೀಗ
ಸಮುದಾಯ,
ಬೆಂಗಳೂರು
ತನ್ನ
ಹೆಮ್ಮೆಯ
ಪ್ರಯೋಗವಾದ
ತುಘಲಕ್
ನಾಟಕವನ್ನು
,
22/11/014
ರಂದು
ರಂಗಶಂಕರದಲ್ಲಿ
ಪ್ರದರ್ಶಿಸಲಿದೆ.
ತುಘಲಕ್
ರಚನೆ
:
ಗಿರೀಶ
ಕಾರ್ನಾಡ್
ಅಭಿನಯ
:
‘ಸಮುದಾಯ'
ಬೆಂಗಳೂರು
ವಿನ್ಯಾಸ
ಮತ್ತು
ನಿರ್ದೇಶನ
:
ಡಾ.
ಸ್ಯಾಮ್ಕುಟ್ಟಿ
ಪಟ್ಟಂಕಾರಿ
ಸಹ
ನಿರ್ದೇಶನ
:
ಡಾ.
ಶ್ರೀಪಾದ
ಭಟ್
ಸ್ಥಳ
:
ರಂಗಶಂಕರ
ದಿನಾಂಕ
ಮತ್ತು
ಸಮಯ
:
22/11/2014,
ಮಧ್ಯಾಹ್ನ
3:30
ಕ್ಕೆ
ಮತ್ತು
ಸಂಜೆ
7:30
ಕ್ಕೆ
ಟಿಕೆಟ್
ದರ
:
ರೂ.
100/-
ಸಂಪರ್ಕಿಸಬೇಕಾದ
ದೂರವಾಣಿ
ಸಂಖ್ಯೆ
:
9900182400;
9739933889
online
booking
:
www.bookmyshow.com