ಬೆಂಗಳೂರಲ್ಲಿ ರೈತರ ಬೃಹತ್ ಪ್ರತಿಭಟನೆ, ನಿರ್ಣಯಗಳು
ಬೆಂಗಳೂರು, ಏ.28 : 'ರೈತ ವಿರೋಧಿ ಭೂಸ್ವಾಧೀನ ಸುಗ್ರೀವಾಜ್ಞೆ'ಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡುವುದಿಲ್ಲ ಎಂದು ವಿವಿಧ ಸಂಘಟನೆಗಳು ಒಕ್ಕೊರಲ ತೀರ್ಮಾನವನ್ನು ಕೈಗೊಂಡಿವೆ. ಬೆಂಗಳೂರಿನಲ್ಲಿ ನಡೆದ ರೈತರ ಬೃಹತ್ ಪ್ರತಿಭಟನೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಕರ್ನಾಟಕ
ರೈತ
ಸಂಘ
ವಿವಿಧ
ಸಂಘಟನೆಗಳ
ಸಹಯೋಗದೊಂದಿಗೆ
'ಭೂಮಿ
ನೀರು
ನಮ್ಮ
ಹಕ್ಕು'
ಎಂಬ
ಘೋಷಣೆಯೊಂದಿಗೆ
ಮಂಗಳವಾರ
ಬೃಹತ್
ಪ್ರತಿಭಟನೆ
ನಡೆಸಿತು.
ಬೆಂಗಳೂರು
ರೈಲ್ವೆ
ನಿಲ್ದಾಣದಿಂದ
ಫ್ರೀಡಂಪಾರ್ಕ್
ತನಕ
ಪ್ರತಿಭಟನಾ
ಜಾಥಾ
ನಡೆಯಿತು.
ಎಲ್ಲರಿಗೂ ಶುದ್ಧ ಕುಡಿಯುವ ನೀರು ಮತ್ತು ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಬೇಕು. ಬಹುರಾಷ್ಟ್ರೀಯ ಸಂಸ್ಥೆಗಳ ಪರವಾಗಿರುವ ರೈತ ವಿರೋಧಿ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಫ್ರೀಡಂಪಾರ್ಕ್ನಲ್ಲಿ
ನಡೆದ
ಬೃಹತ್
ಪ್ರತಿಭಟನಾ
ಸಭೆಯಲ್ಲಿ
ಸಿಪಿಎಂ
ಪ್ರಧಾನ
ಕಾರ್ಯದರ್ಶಿ
ಸೀತಾರಾಂ
ಯೆಚೂರಿ,
ಸಾಮಾಜಿಕ
ಹೋರಾಟಗಾರ್ತಿ
ಮೇಧಾ
ಪಾಟ್ಕರ್,
ಯೋಗೇಂದ್ರ
ಯಾದವ್,
ರಾಜ್ಯ
ರೈತ
ಸಂಘದ
ಅಧ್ಯಕ್ಷ
ಕೆ.ಎಸ್.ಪುಟ್ಟಣ್ಣಯ್ಯ
ಮುಂತಾದವರು
ಪಾಲ್ಗೊಂಡಿದ್ದರು.
ಪ್ರತಿಭಟನಾನಿರತರನ್ನು
ಉದ್ದೇಶಿಸಿ
ಮಾತನಾಡಿದ
ಸೀತಾರಾಂ
ಯೆಚೂರಿ
ಅವರು,
'ಬಹುಮತ
ಇರುವುದರಿಂದ
ಕೇಂದ್ರ
ಸರ್ಕಾರ
ಲೋಕಸಭೆಯಲ್ಲಿ
ಭೂಸ್ವಾಧೀನ
ಸುಗ್ರೀವಾಜ್ಞೆಗೆ
ಅಂಗೀಕಾರ
ಪಡೆದುಕೊಂಡಿದೆ.
ರಾಜ್ಯಸಭೆಯಲ್ಲಿ
ಅಂಗೀಕಾರ
ದೊರೆಯಲು
ಬಿಡುವುದಿಲ್ಲ'
ಎಂದು
ಹೇಳಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮೇಧಾ ಪಾಟ್ಕರ್ ಅವರು, 'ದೇಶದಲ್ಲಿ ಅಂಬಾನಿ, ಅದಾನಿಯಂತಹ ಜಮೀನ್ದಾರರು ಹುಟ್ಟಿಕೊಂಡಿದ್ದಾರೆ. ಇವರಿಗೆ ಕೇಳಿದಷ್ಟು ಜಮೀನು ನೀಡಲು ಕೇಂದ್ರ ಸರ್ಕಾರ ಭೂ ಸ್ವಾಧೀನ ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ಹೊರಟಿದೆ' ಎಂದು ಆರೋಪಿಸಿದರು.
ಸಭೆಯ ನಿರ್ಣಯಗಳು
*
ಭೂಸ್ವಾಧೀನ
ಸುಗ್ರೀವಾಜ್ಞೆಯನ್ನು
ಕೇಂದ್ರ
ಸರ್ಕಾರ
ವಾಪಸ್
ಪಡೆಯಬೇಕು
*
ಬಗರ್ಹುಕುಂ
ಸಾಗುವಳಿದಾರರನ್ನು
ಒಕ್ಕಲೆಬ್ಬಿಸಬಾರದು
*
ಕಸ್ತೂರಿ
ರಂಗನ್
ವರದಿಯನ್ನು
ತಿರಸ್ಕರಿಸಬೇಕು
*
ಅರಣ್ಯ
ಭೂಮಿ
ಸಾಗುವಳಿದಾರರಿಗೆ
ಹಕ್ಕುಪತ್ರಗಳನ್ನು
ನೀಡಬೇಕು