ಬೆಂಗಳೂರು ರೈಲು ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ ನಡೆದಿದ್ದೇಕೆ?
ಬೆಂಗಳೂರು, ಏ.8 : ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿನ ಸಿಬ್ಬಂದಿಗಳು ಮಂಗಳವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು. ಇದರಿಂದ 30ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿ, ಪ್ರಯಾಣಿಕರು ಪರದಾಡುವಂತಾಯಿತು.
ಮಂಗಳವಾರ
ಸಂಜೆ
6
ಗಂಟೆ
ಸುಮಾರಿಗೆ
ಟಿಕೆಟ್
ಕೌಂಟರ್ಗಳನ್ನು
ಬಂದ್
ಮಾಡಿ,
ಸಿಗ್ನಲ್
ದೀಪಗಳನ್ನು
ಆರಿಸಿ
ನಿಲ್ದಾಣದ
ಸಿಬ್ಬಂದಿಗಳು
ದಿಢೀರ್
ಪ್ರತಿಭಟನೆ
ಆರಂಭಿಸಿದರು.
ಇದರಿಂದ
ನಿಲ್ದಾಣಕ್ಕೆ
ಬರಬೇಕಿದ್ದ
ರೈಲುಗಳು
ಮತ್ತು
ನಿಲ್ದಾಣದಿಂದ
ಹೊರಡಬೇಕಿದ್ದ
ರೈಲುಗಳ
ಸಂಚಾರಕ್ಕೆ
ಅಡಚಣೆ
ಉಂಟಾಯಿತು.
[ತುಮಕೂರು-ಅರಸೀಕೆರೆ
ಜೋಡಿ
ಮಾರ್ಗಕ್ಕೆ
ಒಪ್ಪಿಗೆ]
ನೈರುತ್ಯ ರೈಲ್ವೆಯ ವಾಣಿಜ್ಯ ವಿಭಾಗದ (ರವಾನೆ) ಅಧಿಕಾರಿ ಎ.ಆರ್.ಪಾಂಡುರಂಗ ಅವರ ಬಂಧನವನ್ನು ಖಂಡಿಸಿ ಸಿಬ್ಬಂದಿಗಳು ಸುಮಾರು ಎರಡು ತಾಸು ಫ್ಲಾಟ್ಫಾರಂ 8ರ ಬಳಿ ಪ್ರತಿಭಟನೆ ನಡೆಸಿದರು. ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. [ಒಂದು ಲಾಗ್ ಇನ್ ಗೆ ಒಂದೇ ರೈಲ್ವೆ ಟಿಕೆಟ್]
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಪಾಂಡುರಂಗ ಅವರ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಪ್ರತಿಭಟನೆ ಮುಗಿದ ಕೆಲವು ತಾಸುಗಳ ಬಳಿಕ ರೈಲು ಸಂಚಾರ ಯಥಾಸ್ಥಿತಿಗೆ ಬಂದಿತು.
ಪಾಡುರಂಗ ಬಂಧನವೇಕೆ? : ಪಾರ್ಸೆಲ್ ವಿಭಾಗದಲ್ಲಿ ಹಲವು ವರ್ಷಗಳಿಂದ ವಿಲೇವಾರಿಯಾಗದೇ ಇದ್ದ ಬೈಕುಗಳನ್ನು 2014ರ ಮಾರ್ಚ್ನಲ್ಲಿ ಹರಾಜು ಹಾಕಿ ಮಾರಾಟ ಮಾಡಲಾಗಿತ್ತು. ಆದರೆ, ಹರಾಜಿನ ನಂತರ ವಾಹನದ ಮಾಲೀಕರೊಬ್ಬರು ಅಧಿಕಾರಿಗಳು ತಮ್ಮ ಬೈಕನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಪಾರ್ಸೆಲ್ ವಿಭಾಗದ ಹಲವು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಕೆಲವು ಅಧಿಕಾರಿಗಳು ಜಾಮೀನು ಪಡೆದಿದ್ದರು. ಆದರೆ, ಪಾಂಡುರಂಗ ಅವರನ್ನು ಭಾನುವಾರ ಕರ್ತವ್ಯದಲ್ಲಿದ್ದಾಗ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬೈಕ್ಗಳ ಹರಾಜಿನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪಾಂಡುರಂಗ ಅವರನ್ನು ತಕ್ಷಣ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರಿಂದ ಮಂಗಳವಾರ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.