ಬೆಂಗಳೂರು : ವಾಸದ ಮನೆ ಒತ್ತುವರಿ ತೆರವಿಲ್ಲ
ಬೆಂಗಳೂರು, ಮೇ 6 : ಬೆಂಗಳೂರಿನಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ವಾಣಿಜ್ಯ ಕಟ್ಟಡಗಳನ್ನು ಮಾತ್ರ ತೆರವುಗೊಳಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಒತ್ತುವರಿ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸ್ವಲ್ಪ ಸಮಾಧಾನ ಸಿಕ್ಕಿದೆ.
ಮಂಗಳವಾರ
ಕೆರೆ
ಒತ್ತುವರಿ
ತೆರವು
ಕಾರ್ಯಾಚರಣೆ
ಬಗ್ಗೆ
ನಗರ
ಜಿಲ್ಲಾಧಿಕಾರಿ
ವಿ.ಶಂಕರ್
ಮತ್ತು
ಇತರ
ಅಧಿಕಾರಿಗಳೊಂದಿಗೆ
ಸಭೆ
ನಡೆಸಿದ
ಬಳಿಕ
ಮಾಧ್ಯಮಗಳೊಂದಿಗೆ
ರಾಮಲಿಂಗಾ
ರೆಡ್ಡಿ
ಮಾತನಾಡಿದರು.
ಜನರು
ವಾಸವಾಗಿರುವ
ಮನೆಗಳನ್ನು
ತೆರವುಗೊಳಿಸುತ್ತಿಲ್ಲ
ಎಂದು
ಸಚಿವರು
ಈ
ಸಂದರ್ಭದಲ್ಲಿ
ಸ್ಪಷ್ಟಪಡಿಸಿದರು.
[ಒತ್ತುವರಿ
ಕಾರ್ಯಾಚರಣೆ
ವಿರುದ್ಧ
ಹೋರಾಟಕ್ಕೆ
ಇಳಿದ
ಬಿಜೆಪಿ]
ಅಕ್ರಮವಾಗಿ ಕಟ್ಟಲಾಗಿರುವ ವಾಸದ ಮನೆ ತೆರವು ಬಗ್ಗೆ ಸರ್ಕಾರ ಒಂದು ತೀರ್ಮಾನ ತೆಗೆದುಕೊಳ್ಳುವ ವರೆಗೂ ವಾಣಿಜ್ಯ ಕಟ್ಟಡಗಳನ್ನು ಮಾತ್ರ ತೆರವು ಗೊಳಿಸಲಾಗುತ್ತದೆ. ವಾಸದ ಮನೆಗಳನ್ನು ಕೆಡವಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪ ಸುಳ್ಳು. ಮನೆಗಳನ್ನು ತೆರವು ಮಾಡುವುದಿಲ್ಲ, ಜನರು ಆತಂಕಪಡಬೇಕಾಗಿಲ್ಲ ಎಂದರು.[ಸಾರಕ್ಕಿ ಕೆರೆ ತೆರವು ನಿರಾಶ್ರಿತರಿಗೆ ಡಿಸಿ ಶಂಕರ್ ಅಭಯ]
ಮನೆಗಳನ್ನು
ತೆರವು
ಮಾಡಿಲ್ಲ
:
ಸಾರಕ್ಕಿ
ಹಾಗೂ
ಬಾಣಸವಾಡಿಯಲ್ಲಿ
ತೆರವು
ಮಾಡಿರುವ
ಶೇ.
95ರಷ್ಟು
ಕಟ್ಟಡಗಳು
ವಾಣಿಜ್ಯ
ಸಂಕೀರ್ಣಗಳಾಗಿವೆ.
ಸಾರಕ್ಕಿಯಲ್ಲಿ
5
ಮನೆ
ಮಾತ್ರ
ತೆರವುಗೊಳಿಸಲಾಗಿದೆ.
ಬಾಣಸವಾಡಿಯಲ್ಲಿ
ಯಾವುದೇ
ಮನೆ
ತೆರವುಗೊಳಿಸಿಲ್ಲ
ಎಂದು
ಸಚಿವರು
ವಿವರಣೆ
ನೀಡಿದರು.
ಅಧಿಕಾರಿಗಳನ್ನು ಬಿಡೋಲ್ಲ : ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ನಿವೇಶನವನ್ನು ಮಾರಾಟ ಮಾಡಿದವರ ಮೇಲೆಯೂ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇಂತಹ ನಿವೇಶನ ಮಾರಾಟಕ್ಕೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ 9 ಅಧಿಕಾರಿಗಳು ಹಾಗೂ ಬಿಲ್ಡರ್ ಸೇರಿದಂತೆ 446 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದರು.