ಬಿಬಿಎಂಪಿ ಚುನಾವಣೆ ಮುಂದೂಡುವಂತಿಲ್ಲ : ಹೈಕೋರ್ಟ್
ಬೆಂಗಳೂರು, ಮಾ. 30 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಸಕಾಲದಲ್ಲಿ ನಡೆಸಿ ಎಂದು ಕರ್ನಾಟಕ ಹೈಕೋರ್ಟ್ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. ಏ.22ಕ್ಕೆ ಬಿಬಿಎಂಪಿಯ ಆಡಳಿತಾವಧಿ ಕೊನೆಗೊಳ್ಳಲಿದೆ.
ಬಿಜೆಪಿಯ
ಬಿಬಿಎಂಪಿ
ಸದಸ್ಯರಾದ
ಸಿ.ಕೆ.ರಾಮಮೂರ್ತಿ
ಮತ್ತು
ಬಿ.ಸೋಮಶೇಖರ್
ಸಲ್ಲಿಸಿರುವ
ರಿಟ್
ಅರ್ಜಿಯ
ವಿಚಾರಣೆ
ನಡೆಸಿದ
ಹೈಕೋರ್ಟ್
ಸಕಾಲದಲ್ಲಿ
ಚುನಾವಣೆ
ನಡೆಸಿ,
ಬಿಬಿಎಂಪಿ
ವಿಭಜನೆ
ಪ್ರಸ್ತಾಪ
ಮುಂದಿಟ್ಟುಕೊಂಡು
ಚುನಾವಣೆಯನ್ನು
ಮುಂದೂಡಬೇಡಿ
ಎಂದು
ಸೋಮವಾರ
ಆದೇಶ
ನೀಡಿದೆ.
ಹೈಕೋರ್ಟ್
ಆದೇಶದ
ಅನ್ವಯ
ಮೇ.30ರೊಳಗೆ
ಬಿಬಿಎಂಪಿ
ಚುನಾವಣೆ
ನಡೆಯಬೇಕಾಗಿದೆ.
[ಬಿಬಿಎಂಪಿ
ವಿಭಜನೆ
ಹೇಗೆ?,
ಸಂಕ್ಷಿಪ್ತ
ಮಾಹಿತಿ]
ಏ.22ಕ್ಕೆ ಬಿಬಿಎಂಪಿ ಸದಸ್ಯರ ಆಡಳಿತ ಅವಧಿ ಪೂರ್ಣಗೊಳ್ಳುತ್ತಿದೆ. ಆದರೆ, ರಾಜ್ಯ ಸರ್ಕಾರ ಹೊಸ ಚುನಾವಣೆಯ ಬಗ್ಗೆ ಗಂಭೀರ ಆಲೋಚನೆ ಮಾಡಿಲ್ಲ. ಬದಲಿಗೆ ಬಿಬಿಎಂಪಿ ವಿಭಜನೆ ವಿಚಾರದಲ್ಲಿ ಮಗ್ನವಾಗಿದ್ದು, ಚುನಾವಣೆಯನ್ನು ಮುಂದೂಡಲು ಪ್ರಯತ್ನ ನಡೆಸಿದೆ ಎಂದು ರಿಟ್ ಅರ್ಜಿ ಸಲ್ಲಿಕೆಯಾಗಿತ್ತು.[2015-16ಸಾಲಿನ ಬಿಬಿಎಂಪಿ ಬಜೆಟ್ ಮುಖ್ಯಂಶಗಳು]
ಸದಸ್ಯರ ಅವಧಿ ಮುಗಿಯುವ ಆರು ತಿಂಗಳ ಮುನ್ನವೇ ವಾರ್ಡ್ಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿಗಳನ್ನು ಗುರುತಿಸಬೇಕು. ಆದರೆ, ಸರ್ಕಾರ ಈ ಯಾವುದೇ ಪ್ರಕ್ರಿಯೆಗಳನ್ನು ಕೈಗೊಳ್ಳದೇ ಚುನಾವಣೆಯನ್ನು ಮುಂದೂಡಲು ಪ್ರಯತ್ನ ನಡೆಸಿದೆ ಸಕಾಲದಲ್ಲಿ ಚುನಾವಣೆ ನಡೆಸಲು ಆದೇಶ ನೀಡಬೇಕು ಎಂದು ರಿಟ್ ಅರ್ಜಿಯಲ್ಲಿ ಕೋರಲಾಗಿತ್ತು.
ಪಾಲಿಕೆ ವಿಭಜನೆಗೆ ಸರ್ಕಾರದ ಒಪ್ಪಿಗೆ : 198 ವಾರ್ಡ್ಗಳನ್ನು ಹೊಂದಿರುವ ಬಿಬಿಎಂಪಿಯನ್ನು ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ಎಂದು ಮೂರು ಪಾಲಿಕೆಗಳಾಗಿ ವಿಭಜಿಸಲಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ.