ಕೆಎಸ್ ಟಿಡಿಸಿಯಿಂದ ಕಡಲತೀರದ ಪ್ರವಾಸ
ಬೆಂಗಳೂರು, ಆಗಸ್ಟ್ 26: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ದಸರಾ ಹಾಗೂ ದೀಪಾವಳಿ ಪ್ರಯುಕ್ತ 2016, ಅಕ್ಟೋಬರ್ ನಿಂದ ಜನವರಿ 2017ರ ವರೆಗೆ ಕಡಲ ತೀರದ ಪ್ರವಾಸ ಮತ್ತು ಪಾರಂಪರಿಕ ಪ್ರವಾಸ ಆಯೋಜಿಸಲಾಗುತ್ತಿದೆ.
ಕಡಲ ತೀರದ ಪ್ರವಾಸವಾದ ಗೋವಾ, ಗೋಕರ್ಣಕ್ಕೆ 5,600, ಎಸಿ ವಾಹನದಲ್ಲಿ ಮತ್ತು ಪಾರಂಪರಿಕ ಪ್ರವಾಸವಾದ ಉತ್ತರ ಕರ್ನಾಟಕದ ಹಂಪೆ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ವಿಜಯಪುರ ಪ್ರವಾಸಕ್ಕೆ 4,100. ಎಸಿ ವಾಹನದಲ್ಲಿ ಪ್ರತಿ ಗುರುವಾರ ಹೊರಟು ಸೋಮವಾರ ಹಿಂದಿತಿರುಗುವುದು.[ವರ್ಷಪೂರ್ತಿ ಜೋಗ ವೈಭವ : ಏನಿದು ಯೋಜನೆ?]
ಇದರ ಜತೆಗೆ ನಿಗಮದಿಂದ ಪ್ರವಾಸ ಹಾಗೂ ವಸತಿ ಕಾಯ್ದಿರಿಸುವ ವ್ಯವಸ್ಥೆಯೂ ಇದ್ದು, ಹೆಚ್ಚಿನ ವಿವರವನ್ನು ನಿಗಮದ ವೆಬ್ಸೈಟ್ www.karnatakaholidays.netನಿಂದ ಪಡೆದುಕೊಳ್ಳಬಹುದು.[ಕಾರವಾರದ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆ ಮಜಾ]
ಇನ್ನೂ ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರು (ಸಾ), ಕ.ರಾ.ಪ್ರ.ಅ.ನಿ.ನಿ., ಬಾದಾಮಿ ಹೌಸ್, ಮಹಾನಗರಪಾಲಿಕೆ ಎದುರು, ದೂರವಾಣಿ ಸಂಖ್ಯೆ: 4334434, 22275869, 8970650070 , ಟೂರಿಸಂ ಹೌಸ್ ದೂರವಾಣಿ ಸಂಖ್ಯೆ 43464351, 43464352, ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ: 22352901, 902,903 ರೈಲು ನಿಲ್ದಾಣ : 22870068, ಕೇಂಪೇಗೌಡ ಬಸ್ ನಿಲ್ದಾಣ 8970650075 ಸಂಪರ್ಕಿಸಬಹುದು.