ಬೆಂಗಳೂರಿನಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ
ಬೆಂಗಳೂರು, ಸೆಪ್ಟೆಂಬರ್ 12 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಾವೇರಿ ಹೋರಾಟದ ಕಿಚ್ಚು ತೀವ್ರಗೊಂಡಿದೆ. ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬೆಂಗಳೂರು
ನಗರ
ಪೊಲೀಸ್
ಆಯುಕ್ತ
ಎನ್.ಎಸ್.ಮೇಘರಿಕ್
ಅವರು
ಈ
ಕುರಿತು
ಸೋಮವಾರ
ಸಂಜೆ
ಆದೇಶ
ಹೊರಡಿಸಿದರು.
ತಕ್ಷಣದಿಂದ
ಜಾರಿಗೆ
ಬರುವಂತೆ
17
ಗಂಟೆಗಳ
ಅವಧಿಗೆ
ಸಿಆರ್ಪಿಸಿ
144
ಸೆಕ್ಷನ್
ಅನ್ವಯ
ನಿಷೇಧಾಜ್ಞೆ
ಜಾರಿಗೊಳಿಸಲಾಗಿದೆ.[ಚಿತ್ರಗಳು
:
ಹಿಂಸಾಚಾರಕ್ಕೆ
ತಿರುಗಿದ
ಕಾವೇರಿ
ಪ್ರತಿಭಟನೆ]
ಬೆಂಗಳೂರಿನ
ಮೈಸೂರು
ರಸ್ತೆ,
ಸುಂಕದಕಟ್ಟೆ,
ನಾಯಂಡಹಳ್ಳಿ,
ವಿಜಯನಗರ,
ಹಂಪಿ
ನಗರ,
ಮಾಗಡಿ
ರಸ್ತೆ,
ಪೀಣ್ಯ
ಮುಂತಾದ
ಸ್ಥಳಗಳಲ್ಲಿ
ತಮಿಳುನಾಡಿಗೆ
ಸೇರಿದ
ವಾಹನಗಳಿಗೆ
ಬೆಂಕಿ
ಹಚ್ಚಲಾಗಿದೆ.
ಈ
ಹಿನ್ನಲೆಯಲ್ಲಿ
ನಗರದಲ್ಲಿ
ಕಾನೂನು
ಸುವ್ಯವಸ್ಥೆ
ಕಾಪಾಡಲು
ನಿಷೇಧಾಜ್ಞೆ
ಜಾರಿಗೊಳಿಸಲಾಗಿದೆ.[ಬೆಂಗಳೂರಿನಲ್ಲಿರುವ
ತಮಿಳರ
ಪ್ರದೇಶಕ್ಕೆ
ಬಿಗಿ
ಭದ್ರತೆ]
15 ಸಾವಿರ ಪೊಲೀಸ್, 3 ಸಾವಿರ ಗೃಹ ರಕ್ಷಕ ದಳ, 270 ಚೀತಾ ವಾಹನಗಳನ್ನು ಬೆಂಗಳೂರಿನಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಪ್ರತಿಭಟನೆಯಲ್ಲಿ ತೊಡಗಿದ್ದ 200ಕ್ಕೂ ಅಧಿಕ ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.