'ಸಿದ್ದರಾಮಯ್ಯ ಅವರು ನೀಚ ರಾಜಕಾರಣ ಮಾಡುತ್ತಿದ್ದಾರೆ'
ಬೆಂಗಳೂರು, ಆಗಸ್ಟ್ 20 : 'ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ದೇಶದ್ರೋಹಿಗಳನ್ನು ಬಂಧಿಸಿ ಎಂದು' ಮಾಜಿ ಸಚಿವ ಆರ್.ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.
ಬೆಂಗಳೂರಿನಲ್ಲಿ
ಶನಿವಾರ
ಬಿಜೆಪಿ
ಬೃಹತ್
ಪ್ರತಿಭಟನೆ
ನಡೆಸಿತು.
ಆಮ್ನೆಸ್ಟಿ
ಇಂಟರ್
ನ್ಯಾಷನಲ್
ಇಂಡಿಯಾ
ಸಂಸ್ಥೆ
ವಿರುದ್ಧ
ಪ್ರತಿಭಟನೆ
ನಡೆಸಿದ
ಅಖಿಲ
ಭಾರತ
ವಿದ್ಯಾರ್ಥಿ
ಪರಿಷತ್
(ಎಬಿವಿಪಿ)
ಕಾರ್ಯಕರ್ತರ
ಮೇಲೆ
ಲಾಠಿ
ಚಾರ್ಜ್
ನಡೆಸಿದ
ಸರ್ಕಾರದ
ಕ್ರಮವನ್ನು
ಖಂಡಿಸಲಾಯಿತು.['ಎಬಿವಿಪಿ
ಪ್ರತಿಭಟನೆ
ಹಿಂದೆ
ಬಿಜೆಪಿ
ಕೈವಾಡವಿದೆ']
ಮೌರ್ಯ ಸರ್ಕಲ್ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಚ ರಾಜಕಾರಣ ಮಾಡುತ್ತಿದ್ದಾರೆ. ದೇಶ, ನೆಲ, ಜಲ ಭಾಷೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ' ಎಂದು ಸಲಹೆ ನೀಡಿದರು.[ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಕಚೇರಿಗಳಿಗೆ ಬೀಗ!]
'ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೈನಿಕರ ಅವಹೇಳನ ಮಾಡುವಾಗ ಏನು ಮಾಡುತ್ತಿದ್ದೀರಿ?. ದೇಶದ್ರೋಹಿಗಳನ್ನು ರಕ್ಷಣೆ ಮಾಡಬೇಡಿ, ಅವರನ್ನು ಬಂಧಿಸಿ' ಎಂದು ಆರ್.ಅಶೋಕ್ ಆಗ್ರಹಿಸಿದರು.[ಎಬಿವಿಪಿ ವಿರುದ್ಧ ಅಪಹರಣ ಪ್ರಕರಣ]
'ದೇಶದ್ರೋಹಿಗಳನ್ನು ಬಂಧಿಸಿ ಎಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದೀರಿ. ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡಬೇಡಿ' ಎಂದು ಅಶೋಕ್ ಸಲಹೆ ನೀಡಿದರು.