ಬಿಬಿಎಂಪಿ ವಿಭಜನೆ : ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ, ಜೆಡಿಎಸ್
ಬೆಂಗಳೂರು, ಜುಲೈ 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವ ವಿಧೇಯಕಕ್ಕೆ ಅಂಕಿತ ಹಾಕಬಾರದು ಎಂದು ಬಿಜೆಪಿ ಮತ್ತು ಜೆಡಿಎಸ್ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಮಾಡಿವೆ. ಪಾಲಿಕೆ ವಿಭಜನೆ ಮಾಡುವ ವಿಧೇಯಕಕ್ಕೆ ಇಂದು ವಿಧಾನಪರಿಷತ್ತಿನಲ್ಲಿಯೂ ಒಪ್ಪಿಗೆ ಸಿಕ್ಕಿದೆ.
ಬುಧವಾರ
ಬೆಳಗ್ಗೆ
ಪ್ರತಿಪಕ್ಷಗಳಾದ
ಬಿಜೆಪಿ
ಮತ್ತು
ಜೆಡಿಎಸ್ನ
ನಾಯಕರು
ಪಕ್ಷದ
ಶಾಸಕರೊಂದಿಗೆ
ಪ್ರತ್ಯೇಕವಾಗಿ
ರಾಜಭವನಕ್ಕೆ
ಭೇಟಿ
ನೀಡಿ
ವಿಧೇಯಕಕ್ಕೆ
ಅಂಕಿತ
ಹಾಕಬಾರದು
ಎಂದು
ಮನವಿ
ಸಲ್ಲಿಸಿದ್ದಾರೆ.
ವಿಧಾನಸಭೆ
ಮತ್ತು
ವಿಧಾನ
ಪರಿಷತ್ತಿನಲ್ಲಿ
ವಿಧೇಯಕಕ್ಕೆ
ಒಪ್ಪಿಗೆ
ಸಿಕ್ಕಿದ್ದು,
ಶೀಘ್ರದಲ್ಲಿಯೇ
ರಾಜ್ಯಪಾಲರಿಗೆ
ಅದನ್ನು
ರವಾನಿಸಲಾಗುತ್ತದೆ.
[ಬಿಬಿಎಂಪಿ
ಚುನಾವಣಾ
ವೇಳಾಪಟ್ಟಿ]
ವಿಧಾನಪರಿಷತ್ತಿನಲ್ಲಿ ಬಿಬಿಎಂಪಿಯನ್ನು ವಿಭಜನೆ ಮಾಡುವ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2015ಕ್ಕೆ ಸೋಮವಾರ ಒಪ್ಪಿಗೆ ಸಿಕ್ಕಿರಲಿಲ್ಲ. ಬುಧವಾರ ಪ್ರತಿಪಕ್ಷಗಳ ವಿರೋಧದ ನಡುವೆಯೇ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ವಿಧೇಯಕವನ್ನು ಮಂಡನೆ ಮಾಡಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. [ಬಿಬಿಎಂಪಿ ವೆಬ್ ಸೈಟ್ ಹೊಸ ವಿನ್ಯಾಸ]
ಬಿಜೆಪಿ
ನಾಯಕರು
ಹೇಳುವುದೇನು?
:
ರಾಜ್ಯಪಾಲರ
ಭೇಟಿ
ಬಳಿಕ
ಮಾಧ್ಯಮಗಳೊಂದಿಗೆ
ಮಾತನಾಡಿದ
ಜಗದೀಶ್
ಶೆಟ್ಟರ್
ಅವರು,
'ನಮ್ಮ
ಮನವಿಗೆ
ರಾಜ್ಯಪಾಲರು
ಸೂಕ್ತವಾಗಿ
ಸ್ಪಂದಿಸಿದ್ದಾರೆ'
ಎಂದು
ಹೇಳಿದರು.
[ಬಿಬಿಎಂಪಿಯನ್ನು
5
ಭಾಗ
ಮಾಡಿ]
'ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ಸರ್ಕಾರಕ್ಕೆ ಮುಖಭಂಗವಾಗಿದೆ. ಆದರೂ ಬುದ್ಧಿ ಕಲಿಯದ ಸರ್ಕಾರ, ಚುನಾವಣೆ ಸೋಲಿನ ಭೀತಿಯಿಂದ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ವಿಧೇಯಕವನ್ನು ಮಂಡನೆ ಮಾಡಿದೆ' ಎಂದು ದೂರಿದರು.
ಎಚ್.ಡಿ.ಕುಮಾರಸ್ವಾಮಿ ಹೇಳುವುದೇನು? : ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಬಿಬಿಎಂಪಿ ವಿಭಜನೆಯಾದರೆ ಬೆಂಗಳೂರಿನ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆಯೇ?' ಎಂದು ಪ್ರಶ್ನಿಸಿದರು,
'ಸರ್ಕಾರ ಇಲ್ಲಸಲ್ಲದ ನೆಪಗಳನ್ನು ಹೇಳಿಕೊಂಡು ಬಿಬಿಎಂಪಿ ಚುನಾವಣೆ ಮುಂದೂಡುವ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ನಮ್ಮ ಪಕ್ಷ ಅವಕಾಶ ನೀಡುವುದಿಲ್ಲ. ವಿಧೇಯಕಕ್ಕೆ ಅಂಕಿತ ಹಾಕಬಾರದು ಎಂದು ರಾಜ್ಯಪಾಲರಿಗೆ ಎಲ್ಲಾ ಮನವರಿಕೆ ಮಾಡಿಕೊಟ್ಟಿದ್ದೇವೆ' ಎಂದು ಹೇಳಿದರು.