ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರ ಮುಖ್ಯದ್ವಾರದಿಂದಲೇ ಖೈದಿ ಎಸ್ಕೇಪ್!

ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯಬಾಗಿಲಿನಿಂದಲೇ ಖೈದಿಯೊಬ್ಬ ರಾಜಾರೋಷವಾಗಿ ಎಸ್ಕೇಪ್ ಆಗಿದ್ದಾನೆ. ಜೈಲು ಅಧಿಕಾರಿಗಳು ಸಣ್ಣ ಎಡವಟ್ಟನ್ನೇ ಉಪಯೋಗಿಸಿಕೊಂಡು ವಿಚಾರಣಾಧೀನ ಚಾಲಾಕಿ ಖೈದಿ ಹೇಮಂತ್ ತಪ್ಪಿಸಿಕೊಂಡಿದ್ದಾನೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯಬಾಗಿಲಿನಿಂದಲೇ ಖೈದಿಯೊಬ್ಬ ರಾಜಾರೋಷವಾಗಿ ಎಸ್ಕೇಪ್ ಆಗಿದ್ದಾನೆ. ಜೈಲು ಅಧಿಕಾರಿಗಳು ಸಣ್ಣ ಎಡವಟ್ಟನ್ನೇ ಉಪಯೋಗಿಸಿಕೊಂಡು ವಿಚಾರಣಾಧೀನ ಚಾಲಾಕಿ ಖೈದಿ ಹೇಮಂತ್ ತಪ್ಪಿಸಿಕೊಂಡಿದ್ದಾನೆ. ಅರೆ ಇದು ಹೇಗೆ ಅಂತ ಕೇಳ್ತಿರಾ?

ಆಗಿದ್ದಿಷ್ಟೆ; ಹೇಮಂತ್ ಮೇಲೆ ಕಳ್ಳತನ ಮತ್ತು ಇತರ ಎರಡು ಪ್ರಕರಣಗಳಿದ್ದವು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪೊಲೀಸ್ ಕೇಸು ದಾಖಲಾಗಿತ್ತು. [ಪರಪ್ಪನ ಅಗ್ರಹಾರ : ತರಕಾರಿ ವಾಹನದಲ್ಲಿ ಕೈದಿ ಪರಾರಿ!]

Bengaluru: Undertrial prisoner escaped from Parappana Agrahara Jail

ಎರಡು ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಷ್ಟೆ ಹೇಮಂತ್ ಗೆ ಜಾಮೀನು ಮಂಜೂರಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಜಾಮೀನಿನ್ನೂ ಸಿಕ್ಕಿರಲಿಲ್ಲ. ಆದರೆ ಜೈಲಿನ ಅಧಿಕಾರಿಗಳಾದ ಪರಮೇಶ ನಾಯ್ಕ ಮತ್ತು ಹೇಮಾವತಿಯವರಿಗೆ ಒಂದು ಪ್ರಕರಣದಲ್ಲಿ ಸಿಕ್ಕಿದ ಜಾಮೀನನ್ನೇ ತೋರಿಸಿ ಜೈಲಿನಿಂದ ಪರಾರಿಯಾಗಿದ್ದಾನೆ.

ಹೀಗೆ ಚಾಲಾಕಿ ಹೇಮಂತ್ ಜೈಲು ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಬಿಗಿ ಭದ್ರತೆಯ ಜೈಲಿನಿಂದಲೇ ರಾಜಾರೋಷವಾಗಿ ಎಸ್ಕೇಪ್ ಆಗಿದ್ದಾನೆ. [ಅಮ್ಮನಂತೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ಚಿನ್ನಮ್ಮನ ದರ್ಬಾರ್!]

English summary
An under-trial prisoner escaped from Parappana Agrahara Central Prison, Bengaluru. Prisoner Hemanth escaped from main gate by showing his one bail instead of two to come out of jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X