ಬೆಂಗಳೂರಲ್ಲಿ ಗಲಭೆ,ನಿಷೇಧಾಜ್ಞೆ - ಸುದ್ದಿ ಬೆಳವಣಿಗೆಗಳು
ಬೆಂಗಳೂರು, ಜ. 7 : ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆದು ಹಿಂಸಾಚಾರ ಸಂಭವಿಸಿದ ಹಿನ್ನಲೆಯಲ್ಲಿ ಹೊಸಗುಡ್ಡದಹಳ್ಳಿಯ ಶಾಲೆಗೆ ಸೋಮವಾರದ ತನಕ ರಜೆ ಘೋಷಿಸಲಾಗಿದೆ.
ಸಮಯ 4 ಗಂಟೆ : ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆದ ಹೊಸಗುಡ್ಡದಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಐದು ಜನರು ಗುಂಪು ಗೂಡದಂತೆ ಪೊಲೀಸರು ಮುನ್ನೆಚ್ಚರಿಕೆ ಕೈಗೊಳ್ಳಾಗಿದೆ.
ಸಮಯ 2 ಗಂಟೆ : ಬ್ಯಾಟರಾಯನಪುರ ಶಾಲೆಯ ಸಮೀಪ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಒಬ್ಬರನ್ನು ಬಂಧಿಸಲಾಗಿದೆ. ಶಾಲೆಯ ಬಳಿ ಆಗಮಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಶಾಲೆಯ ಕಟ್ಟಡಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು.
ಸಮಯ
1.30
:
ಪೋಷಕರು
ಶಾಲೆಯ
ಕಟ್ಟಡಕ್ಕೆ
ಬೆಂಕಿ
ಹಚ್ಚಲು
ಪ್ರಯತ್ನಿಸಿದ್ದಾರೆ.
ಮುಂಜಾಗ್ರತಾ
ಕ್ರಮವಾಗಿ
ಶಾಲೆಯ
ಸುತ್ತ-ಮುತ್ತ
ಬಿಗಿ
ಪೊಲೀಸ್
ಬಂದೋಬಸ್ತ್
ಏರ್ಪಡಿಸಲಾಗಿದೆ.
200ಕ್ಕೂ
ಹೆಚ್ಚು
ಪೊಲೀಸರು
ಸ್ಥಳದಲ್ಲಿದ್ದು
ಯಾವುದೇ
ಅಹಿತಕರ
ಘಟನೆ
ನಡೆಯದಂತೆ
ಭದ್ರತೆ
ಕೈಗೊಂಡಿದ್ದಾರೆ.
ಸಮಯ
1.15
:
ಸ್ಥಳಕ್ಕೆ
ಬೆಂಗಳೂರು
ನಗರ
ಪೊಲೀಸ್
ಆಯುಕ್ತ
ಎಂ.ಎನ್.ರೆಡ್ಡಿ
ಆಗಮಿಸಿದ್ದು
ಶಾಂತಿ
ಕಾಪಾಡುವಂತೆ
ಜನರಲ್ಲಿ
ಮನವಿ
ಮಾಡಿದ್ದಾರೆ.
ಕಾನೂನು
ಬಾಹಿರವಾಗಿ
ಯಾವ
ಪೋಷಕರು
ಪ್ರತಿಭಟನೆ
ನಡೆಸಬಾರದು.
ಕಲ್ಲು
ತೂರಾಟದಿಂದ
ಪರಿಹಾರ
ಸಿಗುವುದಿಲ್ಲ.
ಪೊಲೀಸರ
ಮೇಲೆ
ನಂಬಿಕೆ
ಇಡಿ.
ನಾವು
ತನಿಖೆ
ನಡೆಸುತ್ತೇವೆ
ಎಂದು
ಹೇಳಿದರು.
Bengaluru
:
Angry
parents
wreck
school
property,
set
property
on
fire
(earlier
today)
pic.twitter.com/lAhMYL0XdI
—
ANI
(@ANI_news)
January
7,
2015
ಶಾಲೆಯ ಬಳಿ ಸೇರಿದ್ದ ಪೋಷಕರನ್ನು ಚದುರಿಸಲಾಗಿದೆ. ಲಾಠಿ ಚಾರ್ಚ್ ಮತ್ತು ಕಲ್ಲು ತೂರಾಟದಿಂದ ಪೊಲೀಸರು ಸೇರಿ ಮೂವರು ಗಾಯಗೊಂಡಿದ್ದಾರೆ. ಸದ್ಯ ಶಾಲೆಯ ಬಳಿ ಪರಿಸ್ಥಿತಿ ಶಾಂತವಾಗಿದ್ದು, ಜನರು ಶಾಂತಿ ಕಾಪಾಡಬೇಕೆಂದು ಎಂ.ಎನ್.ರೆಡ್ಡಿ ಮನವಿ ಮಾಡಿದ್ದಾರೆ. ಶಾಲೆಯ ಶಿಕ್ಷಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದಿನ ಸುದ್ದಿ : ಬ್ಯಾಟರಾಯನಪುರದಲ್ಲಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನೊಬ್ಬ 2ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಶಾಲೆಯ ಮುಂದೆ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.
ಬ್ಯಾಟರಾಯನಪುರ ಸಮೀಪದ ಹೊಸಗುಡ್ಡದಹಳ್ಳಿಯಲ್ಲಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶಾಲೆಯ ಬಳಿ ಬಂದ ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ವಗೊಂಡಿದೆ. [ಲಜ್ಜೆಗೆಟ್ಟ ಅಪ್ಪನ ಕಾಮದಾಹಕ್ಕೆ ಬಲಿಯಾದ ಮಗಳು]
ಪೊಲೀಸರು
ಶಾಲೆಯ
ಶಿಕ್ಷಕನನ್ನು
ಬಂಧಿಸಿ
ಕರೆತಂದಾಗ
ಮುತ್ತಿಗೆ
ಹಾಕಿದ
500ಕ್ಕೂ
ಹೆಚ್ಚು
ಪೋಷಕರು,
ಶಿಕ್ಷಕನ
ಮೇಲೆ
ಹಲ್ಲೆ
ನಡೆಸಿದ್ದಾರೆ.
ಪೋಷಕರನ್ನು
ನಿಯಂತ್ರಿಸಲು
ಹೋದ
ಪೊಲೀಸರ
ಮೇಲೆ
ಕಲ್ಲು
ತೂರಾಟ
ನಡೆಸಿದ್ದರಿಂದ
ಲಾಠಿ
ಚಾರ್ಚ್
ನಡೆಸಿ,
ಅವರನ್ನು
ಚದುರಿಸಿದ್ದಾರೆ.
ಶಾಲೆಯ
ಕಟ್ಟಡಕ್ಕೆ
ಮುತ್ತಿಗೆ
ಹಾಕಲು
ಯತ್ನಿಸಿದ
ಪೋಷಕರನ್ನು
ಚದುರಿಸಲು
ಪೊಲೀಸರು
ಅಶ್ರುವಾಯು
ಪ್ರಯೋಗಿಸಿದ್ದಾರೆ.
[ಬೆಂಗಳೂರು
ವಿವಿ
ಪ್ರಾಧ್ಯಾಪಕಿಯರಿಗೆ
ಲೈಂಗಿಕ
ಕಿರುಕುಳ?]
ಡಿಸಿಪಿ ಲಾಬೂರಾಮ್ ಹಾಗೂ ಸಂದೀಪ್ ಪಾಟೀಲ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 5 ಕೆಎಸ್ಆರ್ಪಿ ತುಕಡಿಗಳನ್ನು ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
2014ರಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು
* ಜುಲೈ ತಿಂಗಳಿನಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣದ ಬೆಂಗಳೂರಿನ ವಿಬ್ಗಯಾರ್ ಶಾಲೆಯಲ್ಲಿ ಬೆಳಕಿಗೆ ಬಂದಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಮಾರ್ಗಸೂಚಿಯನ್ನು ರೂಪಿಸಿತ್ತು.
* ಉಡುಪಿಯ ಹೆಬ್ರಿ ಸಮೀಪದ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ನಾಲ್ವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕನನ್ನು ಹೆಬ್ರಿ ಪೊಲೀಸರು ಬಂಧಿಸಿದ್ದರು. [ಈ ನಿರ್ಧಾರದಿಂದ ಅತ್ಯಾಚಾರ ನಿಲ್ಲುತ್ತಾ?]
* ಬೆಂಗಳೂರಿನಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಲಾಳದ ಮಾರುತಿ ಶಾಲೆಯ ಅತಿಥಿ ಶಿಕ್ಷಕ ಚಂದ್ರಮೌಳಿ (69)ಯನ್ನು ಪೊಲೀಸರು ಬಂಧಿಸಿದ್ದರು.
* ಒಂದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣ ಇಂದಿರಾನಗರ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆಯಲ್ಲಿ ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಆರೋಪಿ ಜೈಶಂಕರ್ನನ್ನು ಬೈಯಪ್ಪನ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.