ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ

|
Google Oneindia Kannada News

ಬೆಂಗಳೂರು, ಜು. 03: ಮಹಾನಗರದಲ್ಲಿ ಮತ್ತೆ ಮಚ್ಚು ಲಾಂಗ್ ಗಳು ಝಳಪಿಸುತ್ತಿವೆ. ಬುದ್ಧಿವಾದ ಹೇಳಿದ್ದ ಮನೆ ಮಾಲಕಿ ಕೈಯನ್ನು ಗುರುವಾರ ಬೆಳಗ್ಗೆ ದುಷ್ಕರ್ಮಿಗಳು ಕತ್ತರಿಸಿಹಾಕಿದ್ದು ವರದಿಯಾಗಿತ್ತು. ಇದೀಗ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ . ಬೆಂಗಳೂರಿನ ಕೋಡಿಗೆಹಳ್ಳಿ ಸಮೀಪದ ಟೆಲಿಕಾಂ ಲೇಔಟ್ ನಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ಸಂಭವಿಸಿದೆ.[ಬೆಂಗಳೂರು: ಬುದ್ಧಿವಾದ ಹೇಳಿದ ಮನೆ ಮಾಲಕಿ ಕೈ ಕಟ್!]

murder

ಹತ್ಯೆಯಾದವರನ್ನು ಶ್ರೀನಿವಾಸ್ (38) ಎಂದು ಗುರುತಿಸಲಾಗಿದೆ. ಟೆಲಿಕಾಂ ಲೇಔಟ್ ನಲ್ಲಿ ಶ್ರೀನೀವಾಸ್ ಮೇಲೆ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.[ಮಾಫಿಯಾಗಳ ಪೈಶಾಚಿಕ ಕೃತ್ಯಕ್ಕೆ ಮತ್ತೊಬ್ಬ ಪತ್ರಕರ್ತ ಬಲಿ]

4 ರಿಂದ 5 ಜನರ ಗುಂಪು ಶ್ರೀನಿವಾಸ್ ಅವರ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ದಾಳಿ ವೇಳೆ ಶ್ರೀನಿವಾಸ್ ತಪ್ಪಿಸಿಕೊಳ್ಳಲು ಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಕೋಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

English summary
Bengaluru: A Real estate businessmen murdered in Kodigehalli, telecom layout on Friday ,June 3 evening. Srinivas(38) killed by 4 or 5 unknown people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X