ರುದ್ರೇಶ್ ಹತ್ಯೆ ಪ್ರಕರಣ, ತನಿಖೆ ಆರಂಭಿಸಿದ ಎನ್ಐಎ
ಈ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದೀನ್, ಎಸ್ ಡಿಪಿಐ, ಪಿಎಫ್ ಐ ಹಾಗೂ ಅಲ್ ಉಮ್ಮಾ ಸಂಘಟನೆಗಳ ಹೆಸರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದೆ
ಬೆಂಗಳೂರು, ಡಿಸೆಂಬರ್ 14: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೈಗೆತ್ತಿಕೊಂಡಿದೆ. ಈ ಪ್ರಕರಣದ ಆರೋಪಿಗಳಿಗೂ ಇಂಡಿಯನ್ ಮುಜಾಹಿದೀನ್ ಉಗ್ರರಿಗೂ ಸಂಪರ್ಕ ಇರುವ ಬಗ್ಗೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಮೊದಲಿಗೆ
ಪ್ರಕರಣದ
ತನಿಖೆ
ನಡೆಸಿದ್ದ
ಕಮರ್ಷಿಯಲ್
ಸ್ಟ್ರೀಟ್
ಠಾಣೆ
ಪೊಲೀಸರು
ಐವರನ್ನು
ಬಂಧಿಸಿದ್ದರು.
ಆರೋಪಿಗಳೆಲ್ಲರೂ
ಪಾಪುಲರ್
ಫ್ರಂಟ್
ಆಫ್
ಇಂಡಿಯಾದ
ಸದಸ್ಯರು
ಎಂದು
ವಿಚಾರಣೆ
ವೇಳೆ
ತಿಳಿದು
ಬಂದಿತ್ತು.
[ರುದ್ರೇಶ್
ಹತ್ಯೆ
ಆರೋಪಿಗಳಿಗೆ
ಇಂಡಿಯನ್
ಮುಜಾಹಿದೀನ್
ನಂಟು!]
ಈ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದೀನ್, ಎಸ್ ಡಿಪಿಐ, ಪಿಎಫ್ ಐ ಹಾಗೂ ಅಲ್ ಉಮ್ಮಾ ಸಂಘಟನೆಗಳ ಹೆಸರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿಗೆ ಸೇರಿದ 9 ಕ್ಕೂ ಅಧಿಕ ಮಂದಿ ಹತ್ಯೆಯಾಗಿದೆ. ಇದೆಲ್ಲವೂ ರಾಜಕೀಯ ದ್ವೇಷದಿಂಡ ಕೂಡಿದ ಕೊಲೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕೇರಳ, ತಮಿಳುನಾಡು ಮೂಲದ ಸುಪಾರಿ ಕಿಲ್ಲರ್ಸ್ ಬಳಸಿ ಇಲ್ಲಿನ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಎಂಬ ಮಾಹಿತಿಯೂ ಇದೆ.(ಒನ್ಇಂಡಿಯಾ ಸುದ್ದಿ)