ಬೆಂಗಳೂರಲ್ಲಿ ಬೆಳವಾಡಿ ನಿರ್ದೇಶನದ 'ಬೆಕೆಟ್' ತಪ್ಪದೇ ನೋಡಿ
ಬೆಂಗಳೂರು, ಜೂನ್ 02: ಬೆಂಗಳೂರು ಥಿಯೇಟರ್ ಕಂಪನಿ ತನ್ನ ಎರಡನೇ ಪ್ರಯೋಗಕ್ಕೆ ಸಜ್ಜಾಗಿದೆ. ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಫ್ರೆಂಚ್ ಮೂಲದ ಜಾನ್ ಆನ್ವಿಯವರ 'ಬೆಕೆಟ್' ನಾಟಕದ ಮೊದಲ ನಾಲ್ಕು ಪ್ರದರ್ಶನವನ್ನು ಜೂನ್ ಮೊದಲ ವಾರಾಂತ್ಯದಲ್ಲಿ ರಂಗಶಂಕರದಲ್ಲಿ ಪ್ರದರ್ಶಿಸುತ್ತಿದೆ.
2015 ರಲ್ಲಿ ರಂಗ ಶಂಕರ ಕನ್ನಡ ನಾಟಕೋತ್ಸವದಲ್ಲಿ ವಂಕಟೇಶ್ ಪ್ರಸಾದ್ ರವರು ನಿರ್ದೇಶಿಸಿದ, ತನ್ನ ಮೊದಲ ನಾಟಕ ಚೆರ್ರಿ ಆರ್ಚರ್ಡ್ ಯಶಸ್ವಿ 15 ಪ್ರದರ್ಶನ ನೀಡಿತ್ತು. ಈಗ ಪ್ರಕಾಶ ಬೆಳವಾಡಿ ನಿರ್ದೇಶನದ ಪ್ರೆಂಚ್ ಮೂಲದ ಜಾನ್ ಆನ್ವಿಯವರ ಬೆಕೆಟ್ ನಾಟಕ ದ ತಯಾರಿಯಲ್ಲಿದೆ. ಬೆಕೆಟ್ ನಾಟಕದ ಮೊದಲ 4 ಪ್ರದರ್ಶನಗಳು ಶನಿವಾರ ಮತ್ತು ಭಾನುವಾರ, ಜೂನ್ 4 ಮತ್ತು 5 ರಂದು ರಂಗ ಶಂಕರದಲ್ಲಿ ನಡೆಯಲಿವೆ.
ಅದೇ ಮೂಲ ಐತಿಹ್ಯ ಮತ್ತು ಮುಖ್ಯ ಪಾತ್ರಗಳು ಎರಡೂ ಕೃತಿಗಳಲ್ಲಿ ಕಾಣಿಸಿಕೊಂಡರೂ, ಅವು ಎತ್ತಿ ಹಿಡಿಯುವ ಪ್ರಶ್ನೆಗಳು ಬೇರೆ ಬೇರೆ ಎಂದು ನನ್ನ ಅನಿಸಿಕೆ. ಎಲಿಯಟ್ ನಾಟಕದಲ್ಲಿ ಕೇಂದ್ರ ಕಥನ ಬೆಕೆಟ್ ಪಾತ್ರದ ನೈತಿಕ ಸತ್ವ ಪರಿಕ್ಷೆಯಾದರೆ, ಆನ್ವಿಯ ಬೆಕೆಟ್ ಎದುರಿಸುವುದು ಧರ್ಮಸಂಕಟ. ಆನ್ವಿಯ ಬೆಕೆಟ್ ನಾಟಕದಲ್ಲಿ ಕೇಂದ್ರ ಕಥನ ಎಂದರೆ ರಾಜಕಾರಣ ಮತ್ತು 'ಧರ್ಮ'ದ ನಡುವೆ ಎನ್ನುವವರಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ.
ಇಲ್ಲಿಯ
ಬೆಕೆಟ್
ಪರಿಹರಿಸಬೇಕಾದ
ಸಮಸ್ಯೆ
ನಿಷ್ಠೆಯದು
-
ಅದನ್ನು
ತಾನು
ರಾಜನಿಂದ
ದೇವರಿಗೆ
ವರ್ಗಾಯಿಸಬೇಕು.
ಬಗೆಹರಿಸಲಾಗದ
ಬಿಕ್ಕಟ್ಟು
ಏನಂದರೆ
ರಾಜನ
ಸೇವೆ,
ದೇವರ
ಸೇವೆ
ಎರಡೂ
ಏಕಕಾಲಕ್ಕೆ
ತನಗೆ
-
ರಾಜನ
ಸ್ನೇಹಿತ
ಮತ್ತು
ಪ್ರೀತಿಪಾತ್ರನಾಗಿಯೂ
-
ಮಾಡಲು
ಸಾಧ್ಯವಿಲ್ಲ
ಅನ್ನಿಸುವುದು.
ಆನ್ವಿಯ ಬೆಕೆಟ್, ಪಿ. ಲಂಕೇಶರ 'ಸಂಕ್ರಾಂತಿ'ಯ ಸಾತ್ವಿಕ ಬಸವಣ್ಣನಲ್ಲ. ಗಿರೀಶ್ ಕಾರ್ನಾಡರ 'ತಲೆದಂಡ'ದ ಬಸವಣ್ಣನೂ ಅಲ್ಲ. ಈತ ಪ್ರಾರಂಭಕ್ಕೆ ಮೋಜುಗಾರ, ಸೊಗಸುಗಾರ, ವಿಷಯಲಂಪಟ. ಇಂಥವನು ದೇವರಗೆ ಮುಖಕೊಡಬೇಕು, ಕಣ್ಣಲ್ಲಿ ದೇವರನ್ನು ತುಂಬಿಕೊಂಡು ಎಲ್ಲ ಸಾಮ್ರಾಜ್ಯಗಳಂತೆ "ದೇವರ ಸಾಮ್ರಾಜ್ಯ"ವನ್ನೂ ಕಾಪಾಡಬೇಕು.
ಸ್ವಲ್ಪ ಮಟ್ಟಿಗೆ ಈ ಬೆಕೆಟ್ ಪಡುವ ಧರ್ಮಸಂಕಟ, ಸಲಿಮ್-ಜಾವೆದ್ ರಚಿಸಿದ 'ನಮಕ್ ಹರಾಮ್' ಚಿತ್ರದಲ್ಲಿ ಕಾಣಬಹುದು.ಇದಲ್ಲದೆ ವಸಾಹತುಷಾಹಿ ಪ್ರತಿಮೆಗಳು, ಜಾತಿ ಪ್ರಜ್ಞೆ, ರಾಷ್ಟ್ರ ಮತ್ತು ಅಸ್ಮಿತೆಯ ಸಂಕಟಗಳು ಮತ್ತು ಹೆಣ್ಣಿನ ಬಗ್ಗೆ ಇರುವ ಧೋರಣೆ ಕುರಿತಂತೆ ಆನ್ವಿಯ ವ್ಯಂಗ್ಯ ನಾಟಕದಲ್ಲಿದೆ. ಎಲಕ್ಕೂ ಮೀರಿ ಈ ನಾಟಕ ರಾಜಕೀಯವಾಗಿ ತುರ್ತಾಗಿ ಸಮಕಾಲೀನ ಅನ್ನಿಸುವುದು ಆಶ್ಚರ್ಯ ಮೂಡಿಸುತ್ತದೆ
ನಾಟಕ:
ಬೆಕೆಟ್
ಪ್ರಸ್ತುತಿ:
ಬೆಂಗಳೂರು
ಥಿಯೇಟರ್
ಕಂಪನಿ
ಫ್ರೆಂಚ್
ಮೂಲ
:
ಜಾನ್
ಶನ್ವಿ
ವಿನ್ಯಾಸ
ಮತ್ತು
ನಿರ್ದೇಶನ
:
ಪ್ರಕಾಶ್
ಬೆಳವಾಡಿ
ಸ್ಥಳ
:
ರಂಗಶಂಕರ
ದಿನಾಂಕ
ಮತ್ತು
ಸಮಯ
:
04/06
2014
ಮತ್ತು.05/06/2016
;ಸಂಜೆ
3
30
ಮತ್ತು
7:30
ಟಿಕೆಟ್
ದರ
:
ರೂ.
100/-
ಸಂಪರ್ಕಿಸ
ಬೇಕಾದ
ದೂರವಾಣಿ
ಸಂಖ್ಯೆ
:
9483709735
;
9900182400
ವೆಬ್
ಸೈಟ್
:
www.bookmyshow.com
(ಒನ್ಇಂಡಿಯಾ ಸುದ್ದಿ)