ಬೆಳವಾಡಿ ನಿರ್ದೇಶನದ 'ಬೆಕೆಟ್', ಕಲಾಗ್ರಾಮ, ಕಲಾಸೌಧದಲ್ಲಿ ಪ್ರದರ್ಶನ
ಬೆಂಗಳೂರು, ಜೂನ್ 29: ಬೆಂಗಳೂರು ಥಿಯೇಟರ್ ಕಂಪನಿ ತನ್ನ ಎರಡನೇ ಪ್ರಯೋಗ 'ಬೆಕೆಟ್' ನಾಟಕದ ಐದನೇ ಮತ್ತು ಆರನೇ ಪ್ರದರ್ಶನಕ್ಕೆ ಸಜ್ಜಾಗಿದೆ.
2015ರಲ್ಲಿ ರಂಗ ಶಂಕರ ಕನ್ನಡ ನಾಟಕೋತ್ಸವದಲ್ಲಿ ವಂಕಟೇಶ್ ಪ್ರಸಾದ್ ರವರು ನಿರ್ದೇಶಿಸಿದ, ತನ್ನ ಮೊದಲ ನಾಟಕ ಚೆರ್ರಿ ಆರ್ಚರ್ಡ್ ಯಶಸ್ವಿ 15 ಪ್ರದರ್ಶನ ನೀಡಿ ಈಗ ಪ್ರಕಾಶ್ ಬೆಳವಾಡಿ ನಿರ್ದೇಶನದ ಪ್ರೆಂಚ್ ಮೂಲದ ಜಾನ್ ಆನ್ವಿಯವರ 'ಬೆಕೆಟ್' ನಾಟಕ ದ ತಯಾರಿಯಲ್ಲಿದೆ. ಇದೇ ಗುರುವಾರ, ಜೂನ್ 30 ಕಲಾಗ್ರಾಮದಲ್ಲಿ ಮತ್ತು ಭಾನುವಾರ, ಜುಲೈ 3 ರಂದು ಹನುಮಂತನಗರದ ಕೆಎಚ್ ಕಲಾಸೌಧದಲ್ಲಿ ನಡೆಯಲಿವೆ.
ನಾಟಕದ
ಬಗ್ಗೆ:
ಜಾನ್
ಆನ್ವಿ
ರಚಸಿದ
ಬೆಕೆಟ್
(ಮೂಲ
ಫ್ರೆಂಚ್
ನಾಟಕ)ನಾಟಕದ
ಐತಿಹಾಸಿಕ
ನೆಲೆ
12ನೇ
ಶತಮಾನದ
ಇಂಗ್ಲೆಂಡಿನ
ನಾರ್ಮನ
ಜನಾಂಗದ
ದೊರೆ
ಎರಡನೆ
ಹೆನ್ರಿ
ಮತ್ತು
ಕ್ಯಾಥೋಲಿಕ್
ಚರ್ಚಿನ
ಥಾಮಸ್
ಬೆಕೆಟ್
ನಡುವೆ
ಆದ
ಸಮರ.
(ಆನ್ವಿಯವರು
ನಾಟಕ
ಬರೆಯುವಾಗ
ಮುಂದೆ
ಸಂತರೆಂದು
ಘೋಷಿತರಾದ
ಬೆಕೆಟ್
ಅವರನ್ನು
ಸಾಕ್ಸನ್
ಜನಾಂಗದವರೆಂದು
ತಪ್ಪಾಗಿ
ಗ್ರಹಿಸಿದ್ದರು)ಈ
ಕೃತಿಯನ್ನು
ಟಿ.ಎಸ್.
ಎಲಿಯಟ್
ರಚಿಸಿದ
ಕಾವ್ಯ
ನಾಟಕವಾದ
''Murder
in
the
Cathedralಗೆ
ವಿಮರ್ಶಕರು
ಆಗಾಗ
ಹೋಲಿಸುವುದು
ಉಂಟು.
ಅದೇ ಮೂಲ ಐತಿಹ್ಯ ಮತ್ತು ಮುಖ್ಯ ಪಾತ್ರಗಳು ಎರಡೂ ಕೃತಿಗಳಲ್ಲಿ ಕಾಣಿಸಿಕೊಂಡರೂ, ಅವು ಎತ್ತಿ ಹಿಡಿಯುವ ಪ್ರಶ್ನೆಗಳು ಬೇರೆ ಬೇರೆ ಎಂದು ನನ್ನ ಅನಿಸಿಕೆ. ಎಲಿಯಟ್ ನಾಟಕದಲ್ಲಿ ಕೇಂದ್ರ ಕಥನ ಬೆಕೆಟ್ ಪಾತ್ರದ ನೈತಿಕ ಸತ್ವ ಪರಿಕ್ಷೆಯಾದರೆ, ಆನ್ವಿಯ ಬೆಕೆಟ್ ಎದುರಿಸುವುದು ಧರ್ಮಸಂಕಟ.
ಆನ್ವಿಯ ಬೆಕೆಟ್ ನಾಟಕದಲ್ಲಿ ಕೇಂದ್ರ ಕಥನ ಎಂದರೆ ರಾಜಕಾರಣ ಮತ್ತು 'ಧರ್ಮ'ದ ನಡುವೆ ಎನ್ನುವವರಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ. ಇಲ್ಲಿಯ ಬೆಕೆಟ್ ಪರಿಹರಿಸಬೇಕಾದ ಸಮಸ್ಯೆ ನಿಷ್ಠೆಯದು - ಅದನ್ನು ತಾನು ರಾಜನಿಂದ ದೇವರಿಗೆ ವರ್ಗಾಯಿಸಬೇಕು. ಬಗೆಹರಿಸಲಾಗದ ಬಿಕ್ಕಟ್ಟು ಏನಂದರೆ ರಾಜನ ಸೇವೆ, ದೇವರ ಸೇವೆ ಎರಡೂ ಏಕಕಾಲಕ್ಕೆ ತನಗೆ - ರಾಜನ ಸ್ನೇಹಿತ ಮತ್ತು ಪ್ರೀತಿಪಾತ್ರನಾಗಿಯೂ - ಮಾಡಲು ಸಾಧ್ಯವಿಲ್ಲ ಅನ್ನಿಸುವುದು.
ಆನ್ವಿಯ
ಬೆಕೆಟ್,
ಪಿ.
ಲಂಕೇಶರ
'ಸಂಕ್ರಾಂತಿ'ಯ
ಸಾತ್ವಿಕ
ಬಸವಣ್ಣನಲ್ಲ.
ಗಿರೀಶ್
ಕಾರ್ನಾಡರ
'ತಲೆದಂಡ'ದ
ಬಸವಣ್ಣನೂ
ಅಲ್ಲ.
ಈತ
ಪ್ರಾರಂಭಕ್ಕೆ
ಮೋಜುಗಾರ,
ಸೊಗಸುಗಾರ,
ವಿಷಯಲಂಪಟ.
ಇಂಥವನು
ದೇವರಗೆ
ಮುಖಕೊಡಬೇಕು,
ಕಣ್ಣಲ್ಲಿ
ದೇವರನ್ನು
ತುಂಬಿಕೊಂಡು
ಎಲ್ಲ
ಸಾಮ್ರಾಜ್ಯಗಳಂತೆ
"ದೇವರ
ಸಾಮ್ರಾಜ್ಯ"ವನ್ನೂ
ಕಾಪಾಡಬೇಕು.
ಬೆಳವಾಡಿ ನಿರ್ದೇಶನ 'ಬೆಕೆಟ್' ನಾಟಕದ ದೃಶ್ತ್ಯಗಳು
ಸ್ವಲ್ಪ ಮಟ್ಟಿಗೆ ಈ ಬೆಕೆಟ್ ಪಡುವ ಧರ್ಮಸಂಕಟ, ಸಲಿಮ್-ಜಾವೆದ್ ರಚಿಸಿದ 'ನಮಕ್ ಹರಾಮ್' ಚಿತ್ರದಲ್ಲಿ ಕಾಣಬಹುದು.ಇದಲ್ಲದೆ ವಸಾಹತುಷಾಹಿ ಪ್ರತಿಮೆಗಳು, ಜಾತಿ ಪ್ರಜ್ಞೆ, ರಾಷ್ಟ್ರ ಮತ್ತು ಅಸ್ಮಿತೆಯ ಸಂಕಟಗಳು ಮತ್ತು ಹೆಣ್ಣಿನ ಬಗ್ಗೆ ಇರುವ ಧೋರಣೆ ಕುರಿತಂತೆ ಆನ್ವಿಯ ವ್ಯಂಗ್ಯ ನಾಟಕದಲ್ಲಿದೆ. ಎಲಕ್ಕೂ ಮೀರಿ ಈ ನಾಟಕ ರಾಜಕೀಯವಾಗಿ ತುರ್ತಾಗಿ ಸಮಕಾಲೀನ ಅನ್ನಿಸುವುದು ಆಶ್ಚರ್ಯ ಮೂಡಿಸುತ್ತದೆ...
ನಾಟಕ:
ಬೆಕೆಟ್
ಪ್ರಸ್ತುತಿ:
ಬೆಂಗಳೂರು
ಥಿಯೇಟರ್
ಕಂಪನಿ
ಫ್ರೆಂಚ್
ಮೂಲ
:
ಜಾನ್
ಶನ್ವಿ
ವಿನ್ಯಾಸ
ಮತ್ತು
ನಿರ್ದೇಶನ
:
ಪ್ರಕಾಶ್
ಬೆಳವಾಡಿ
ಸ್ಥಳ
:
ರಂಗಶಂಕರ
ದಿನಾಂಕ
ಮತ್ತು
ಸಮಯ
:
30/06/2016
ಸ್ಥಳ
:
ಕಲಾಗ್ರಾಮ,
ಮಲ್ಲತ್ತಹಳ್ಳಿ
ದಿನಾಂಕ
:
03/07/2016
ಸ್ಥಳ
:ಕೆ.ಹೆಚ್.
ಕಲಾಸೌಧ,
ಹನುಮಂತನಗರ
ಸಮಯ
:
7
ಗಂಟೆಗೆ
ಟಿಕೆಟ್
ದರ
:
ರೂ.
100/-
ಸಂಪರ್ಕಿಸ
ಬೇಕಾದ
ದೂರವಾಣಿ
ಸಂಖ್ಯೆ
:
9483709735
;
9900182400
ವೆಬ್ ಸೈಟ್ : www.bookmyshow.com
(ಒನ್ಇಂಡಿಯಾ ಸುದ್ದಿ)