ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಆಂಧ್ರದ ನಕ್ಸಲ್ ದಂಪತಿ
ಬೆಂಗಳೂರು, ಸೆ. 17 : ಆಂಧ್ರಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ದಂಪತಿಗಳನ್ನು ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ತಲೆ ಮರಿಸಿಕೊಂಡಿದ್ದ ಈ ದಂಪತಿಗಳು ಪೀಣ್ಯ ಸಮೀಪ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಪೀಣ್ಯ
ಪೊಲೀಸ್
ಠಾಣಾ
ವ್ಯಾಪ್ತಿಯ
ದಾಸರಹಳ್ಳಿಯ
ಭೈರವೇಶ್ವರನಗರದ
ಮನೆಯೊಂದರ
ಮೇಲೆ
ಖಚಿತ
ಮಾಹಿತಿ
ಮೇರೆಗೆ
ದಾಳಿ
ನಡೆಸಿದ
ಆಂಧ್ರ
ಮತ್ತು
ಬೆಂಗಳೂರಿನ
ಪೊಲೀಸರ
ತಂಡ
ಕೃಷ್ಣ
ಮತ್ತು
ಭವಾನಿ
ದಂಪತಿಗಳನ್ನು
ಬಂಧಿಸಿದ್ದು,
ಹೆಚ್ಚಿನ
ವಿಚಾರಣೆಗಾಗಿ
ಆಂಧ್ರಪ್ರದೇಶಕ್ಕೆ
ಕರೆದುಕೊಂಡು
ಹೋಗಿದ್ದಾರೆ.
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಕೃಷ್ಣ ಮತ್ತು ಭವಾನಿ ದಂಪತಿ ರಮಣಯ್ಯ ಎಂಬುವವರ ಮನೆಯನ್ನು ಬಾಡಿಗೆ ಪಡೆದು ಕಳೆದ ಎರಡು ವರ್ಷಗಳಿಂದ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. [ಶೃಂಗೇರಿ : ಎಎನ್ಎಫ್ ಗುಂಡಿಗೆ ಆಟೋ ಚಾಲಕ ಬಲಿ]
ಪೊಲೀಸರು ಅವರನ್ನು ಬಂಧಿಸಿದ ನಂತರ ಅವರು ನಕ್ಸಲರು ಎಂಬುದು ನಮಗೆ ತಿಳಿಯಿತು. ಎರಡು ವರ್ಷಗಳಿಂದ ಅವರು ಇಲ್ಲಿ ವಾಸಿಸುತ್ತಿದ್ದು, ಅಕ್ಕಪಕ್ಕದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಮನೆಯ ಮಾಲೀಕ ರಮಣಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆಂಧ್ರ ಪೊಲೀಸರು ಮನೆ ಮಾಲೀಕರ ಹೇಳಿಕೆಯನ್ನು ಪಡೆದಿದ್ದಾರೆ. [ಅಪಘಾತದಲ್ಲಿ ಪೇದೆ ಸಾವು, ಕಣ್ಣು, ಕಿಡ್ನಿ ದಾನ]
ದಂಪತಿಗಳು ಆಂಧ್ರಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಅವರು ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಬೆಂಗಳೂರಿನಲ್ಲಿ ಅವರು ಅಡಗಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತ ದಂಪತಿಗಳ ಹೆಚ್ಚಿನ ವಿಚಾರಣೆ ಆಂಧ್ರದಲ್ಲಿ ನಡೆಯುತ್ತಿದೆ.