ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಸಭೆ ಚುನಾವಣೆವರೆಗೆ ಗುಜರಾತ್ 'ಕೈ' ಶಾಸಕರು ಬೆಂಗ್ಳೂರಲ್ಲೇ?

ಗುಜರಾತ್ ನ ಕಾಂಗ್ರೆಸ್ ಶಾಸಕರು ಬಿಡದಿ ಬಳಿಯ ಈಗಲ್ ಟೌನ್ ರೆಸಾರ್ಟ್ ಗೆ ರವಾನೆ. ಗುಜರಾತ್ ನಲ್ಲಿ ಆಪರೇಷನ್ ಕಮಲ ಭೀತಿ ಆವರಿಸಿರುವುದರಿಂದ ಈ ಕ್ರಮ ಕೈಗೊಂಡ ಹೈಕಮಾಂಡ್.

|
Google Oneindia Kannada News

ಬೆಂಗಳೂರು, ಜುಲೈ 29: ಗುಜರಾತ್ ನಲ್ಲಿ ಎದುರಾಗಿರುವ ಕುದುರೆ ವ್ಯಾಪಾರ ಭೀತಿಯಿಂದ ಪಾರಾಗಲು ಆ ರಾಜ್ಯದ ತನ್ನ 40 ಶಾಸಕರನ್ನು ಬೆಂಗಳೂರಿಗೆ ರವಾನಿಸಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯಸಭೆಯ ಚುನಾವಣೆ ಮುಗಿಯುವವರೆಗೂ ಅವರನ್ನು ಬೆಂಗಳೂರಿನಲ್ಲೇ ಇರುವಂತೆ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಆಗಸ್ಟ್ 8ರಂದು ಗುಜರಾತ್ ನ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಗುರುವಾರದಿಂದ ಶುಕ್ರವಾರದೊಳಗೆ 6 ಶಾಸಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿರುವುದರಿಂದ ಅಲ್ಲಿ ಭಾರೀ ಬಿಕ್ಕಟ್ಟು ಉಲ್ಬಣವಾದಂತಾಗಿದೆ. ಆರು ಜನರು ಕಾಂಗ್ರೆಸ್ ತೊರೆದಿರುವುದರಿಂದ ಅಲ್ಲಿ ಪಕ್ಷದ ಶಾಸಕರ ಸಂಖ್ಯೆ 51ಕ್ಕೆ ಇಳಿದಿದೆ.

'ಆಪರೇಷನ್ ಕಮಲ' ಭಯ, 44 ಗುಜರಾತ್ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ'ಆಪರೇಷನ್ ಕಮಲ' ಭಯ, 44 ಗುಜರಾತ್ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ

All hijacked congress MLAs of Gujarat may stay here till Rajya Sabha election ends

ಅಲ್ಲದೆ, ಮತ್ತಷ್ಟು ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುವ ಭೀತಿ ಎದುರಾಗಿತ್ತಾದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಲ್ಪ ದಿನದ ಮಟ್ಟಿಗೆ ಎಲ್ಲಾ ತನ್ನ ಶಾಸಕರನ್ನು ಆ ಸನ್ನಿವೇಶದಿಂದ ದೂರವಿರಿಸಿ, ಬಿಜೆಪಿ ಸೇರುವ ಸಮೂಹ ಸನ್ನಿಯಿಂದ ಪಾರು ಮಾಡಲು ಕಾಂಗ್ರೆಸ್ ಉದ್ದೇಶಿಸಿದೆ.

ಗುಜರಾತ್: ಶಾಸಕರಿಗೆ ಬಿಜೆಪಿಯಿಂದ 10 ಕೋಟಿ ಆಫರ್ - ಕಾಂಗ್ರೆಸ್ ಆರೋಪಗುಜರಾತ್: ಶಾಸಕರಿಗೆ ಬಿಜೆಪಿಯಿಂದ 10 ಕೋಟಿ ಆಫರ್ - ಕಾಂಗ್ರೆಸ್ ಆರೋಪ

ಹಾಗಾಗಿಯೇ, ಅವರೆಲ್ಲರನ್ನೂ ದೂರದ ಕರ್ನಾಟಕಕ್ಕೆ ರವಾನಿಸಲಾಗಿದೆ. ಗುಜರಾತ್ ಗೆ ಹತ್ತಿರುವಿರುವ ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಅಲ್ಲೇ ಇವರಿಗೆ ವ್ಯವಸ್ಥೆ ಮಾಡಬಹುದಾಗಿತ್ತು. ಆದರೆ, ಹತ್ತಿರದಲ್ಲಿ ಇರುವುದು ಬೇಡ ಎಂಬರ್ಥದಲ್ಲಿ ದೂರದ ಕರ್ನಾಟಕಕ್ಕೆ ಈ ಶಾಸಕರನ್ನು ಕಳುಹಿಸಲಾಗಿದೆ.

English summary
Due to Fear of horse-trading in Gujarat by BJP, all 44 congress MLAs of Gujarat, came to Bengaluru. All of those will be stayed in eagle town resort near Bidadi. They may stay in Bidadi till Rajya sabha elections, says sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X