ಬೆಳ್ಳಂದೂರು ಕೆರೆ ಆಯ್ತು, ಇದೀಗ ಬೆನ್ನಿಗನಹಳ್ಳಿ ಕೆರೆಯಲ್ಲೂ ಬೆಂಕಿ!
ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಆದರೆ ಇದೀಗ ಬೆಂಗಳೂರಿನ ಬೆನ್ನಿಗನಹಳ್ಳಿಯ ಕೆರೆಯೊಂದರಲ್ಲೂ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಈ ಪ್ರದೇಶದ ಜನರನ್ನು ಆತಂಕಕ್ಕೀಡು ಮಾಡಿತ್ತು.
ಬೆಂಗಳೂರು, ಏಪ್ರಿಲ್ 29: ಬೆಳ್ಳಂದೂರು ಕೆರೆಯಲ್ಲಿ ನೊರೆ ಮತ್ತು ಬೆಂಕಿ ಕಾಣಿಸಿಕೊಂಡು, ಬಿಬಿಎಂಪಿ, ಬಿಡಿಎ ಅಧಿಕಾರಿಗಳನ್ನು ರಾಷ್ಟ್ರೀಯ ಹಸಿರು ಪ್ರಾಧಿಕಾರ ತರಾಟೆಗೆ ತೆಗೆದುಕೊಂಡಿದ್ದು ಹಳೇ ವಿಷಯ. ಈಗಾಗಲೇ ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯವೂ ಆರಂಭವಾಗಿದೆ. ಆದರೆ ಇದೀಗ ಬೆಂಗಳೂರಿನ ಬೆನ್ನಿಗನಹಳ್ಳಿಯ ಕೆರೆಯೊಂದರಲ್ಲೂ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಈ ಪ್ರದೇಶದ ಜನರನ್ನು ಆತಂಕಕ್ಕೀಡು ಮಾಡಿತ್ತು.
ಬೆಳ್ಳಂದೂರು ಕೆರೆಯಂತೆಯೇ, ಇಲ್ಲಿಯೂ ಕೆರೆಯನ್ನೇ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದ್ದರಿಂದ ಕೆರೆಯಲ್ಲಿ ಈಗಾಗಲೇ ಸಾಕಷ್ಟು ರಾಸಾಯನಿಕಗಳು ಶೇಖರಗೊಂಡಿವೆ. ನೀರೂ ಮಾಲಿನ್ಯಕ್ಕೊಳಗಾಗಿದೆ. ಇದರಿಂದಾಗಿಯೇ ಕೆರೆಯಲ್ಲಿ ಬೆಂಕಿ ಕಾಣಿಸಿಕೊಡಂಇದೆ ಎಂಬುದು ಸ್ಥಳೀಯರ ಅಂಬೋಣ.[ಬೆಂಗಳೂರಿನಲ್ಲಿ ಕಸ ಸುಡುವವರಿಗೂ ದಂಡ!]
ಈ ಬಗ್ಗೆ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ಈಗಲೇ ಕ್ರಮ ಕೈಗೊಳ್ಳದಿದ್ದಲ್ಲಿ ಇದೂ ಮತ್ತೊಂದು ಬೆಳ್ಳಂದೂರು ಕೆರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಈ ಭಾಗದ ಜನರ ಆಕ್ರೋಶದ ನುಡಿ. ಈ ಬಗ್ಗೆ ಬಿಡಿಎ ಕ್ರಮ ಕೈಗೊಳ್ಳುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.