ಗೌಡರೇ ಜಿಮ್ ಗೆ ಹೋಗಬೇಡಿಪ್ಪಾ: ಯಡಿಯೂರಪ್ಪ
ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸದಲ್ಲಿರುವ ಮಾಜಿ ಸಿಎಂ ಬುಧವಾರ ಬೆಳಗ್ಗೆ ಹಾಲಿ ಸಿಎಂಗೆ ಹೀಗೆ ವಿನಂತಿ ಮಾಡಿದ್ದಾರೆ: ರಾಜ್ಯದ ಮುಕ್ಕಾಲು ಭಾಗ ಬರದಿಂದ ತತ್ತರಿಸುತ್ತಿದೆ. ಇಂತಹ ಸಂಕಟದ ಸ್ಥಿತಿಯಲ್ಲಿ ಉದ್ಯಮಿಗಳಿಂದ ಬಂಡವಾಳ ಆಕರ್ಷಿಸಲು ವಿದೇಶ ಪ್ರವಾಸ ಕೈಗೊಳ್ಳುವುದು ವಿಪರ್ಯಾಸವಾದೀತು. ಆದ್ದರಿಂದ ವಿದೇಶಕ್ಕೆ ಹೋಗುವ ಬಗ್ಗೆ ಮತ್ತೊಮ್ಮೆ ಆಲೋಚಿಸಿ' ಎಂದಿದ್ದಾರೆ.
ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಅಧಿಕಾರಿಗಳ ದಂಡಿನೊಂದಿಗೆ (Global Investors Meet- GIM) ಇದೇ 15 ರ ರಾತ್ರಿ ಬೆಂಗಳೂರಿನಿಂದ ಹೊರಡಲು ಸಿದ್ಧತೆ ನಡೆಸಿದ್ದಾರೆ. ಸಿಂಗಾಪುರ ಮತ್ತು ಜಪಾನ್ ಸುತ್ತಾಡಿ, ಅಲ್ಲಿನ ಬಂಡವಾಳಶಾಹಿಗಳನ್ನು ಭೇಟಿ ಮಾಡಿ ಏ. 21ಕ್ಕೆ ವಾಪಸಾಗಲಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿ ಜನರಿಗೆ ಅಭಯ ನೀಡಬೇಕಾಗಿರುವುದು ಯಾವುದೋ ದೇವರು ದಿಂಡಿರು ಅಲ್ಲ. ಬದಲಿಗೆ ಕಂದಾಯ ಸಚಿವರು. ಆದರೆ ಖುದ್ದು ಸದಾನಂದ ಗೌಡರೇ ಆ ಖಾತೆಯ ಹೊಣೆಹೊತ್ತಿರುವಾಗ ಇದ್ಯಾತರದ್ದು ವಿದೇಶ ಪ್ರವಾಸ ಎಂದು ಮಂದಿ ಕೇಳುವಂತಾಗಿದೆ.
ರಾಜ್ಯದ
ಜನತೆಯನ್ನು
ಕಂಗಾಲು
ಮಾಡಿರುವ
ಬರಗಾಲವನ್ನು
ಹೇಗೆ
ನಿರ್ವಹಿಸಬೇಕು
ಎಂಬುದನ್ನು
ಅಧ್ಯಯನ
ಮಾಡಲು
ಗೌಡರು
ವಿದೇಶಕ್ಕೆ
ಹೊರಟಿರಬಹುದು
ಎಂದು
ಮಾಜಿ
ಸಿಎಂ
ಎಚ್
ಡಿ
ಕುಮಾರಸ್ವಾಮಿ
ಸಹ
ವ್ಯಂಗ್ಯವಾಡಿದ್ದಾರೆ.
ಇನ್ನು,
ಕೆಪಿಸಿಸಿ
ಅಧ್ಯಕ್ಷ
ಡಾ.
ಜಿ
ಪರಮೇಶ್ವರ್
ಅವರೂ
ಕಿಡಿಕಾರಿದ್ದಾರೆ
-
ಕೇಂದ್ರಕ್ಕೆ
ಬರ
ವರದಿ
ಸಲ್ಲಿಸಿ,
ಹೆಚ್ಚಿನ
ಅನುದಾನ
ತಂದು
ಜನರಿಗೆ
ಅನುಕೂಲ
ಮಾಡಿಕೊಡಬೇಕಾದ
ಮುಖ್ಯಮಂತ್ರಿಗಳು
ಬಂಡವಾಳ
ಆಕರ್ಷಣೆ
ನೆಪದಲ್ಲಿ
ವಿದೇಶಕ್ಕೆ
ಹೊರಟಿರುವುದು
ನಾಡಿನ
ದುರಂತ
ಎಂದಿದ್ದಾರೆ.
when
the
rome
is
burning
...
ನೀವೆನನ್ನುತ್ತೀರಿ!?