ಗದಗ: ಮಧುಮೇಹಿ ರಾಮುಲು ಆರೋಗ್ಯ ಏರುಪೇರು
ಮಂಗಳವಾರ ರಾತ್ರಿಯೇ ರಾಮುಲು ಆರೋಗ್ಯ ಗಂಭೀರವಾಗಿದೆ. ಹುಬ್ಬಳಿಯಿಂದ ತಜ್ಞ ವೈದ್ಯರ ತಂಡ ಆಗಮಿಸಿದ್ದು, ರಾಮುಲು ಆರೋಗ್ಯದ ಮೇಲೆ ನಿಗಾಯಿಟ್ಟಿದೆ. ಎರಡು ದಿನಗಳ ಉಪವಾಸ ಬುಧವಾರ ಮಧ್ಯಾಹ್ನದ ವೇಳೆಗೆ ಅಂತ್ಯಗೊಳ್ಳಲಿದೆ.
ತುದಿಗಾಲಲ್ಲಿ ನಿಂತಿರುವ ಶಾಸಕರು: ಶ್ರೀರಾಮುಲು ಅವರ ಹೊಸ ಪಕ್ಷಕ್ಕೆ ಬರಲು ಹಲವು ಶಾಸಕರು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ನ ಸುಮಾರು 30-40 ಶಾಸಕರು ಶ್ರೀರಾಮುಲು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಬಹಿರಂಗವಾಗಿ ಗುರುತಿಸಿಕೊಳ್ಳಲು ತಾಂತ್ರಿಕ ತೊಂದರೆ ಎದುರಾಗುತ್ತದೆ ಎಂದು ಅವರ ಬೆಂಬಲಿಗರು ಹೇಳುತ್ತಾರೆ.
ಬಿಜೆಪಿ ಸರಕಾರ ಶೀಘ್ರವೇ ಪತನವಾಗಲಿದ್ದು, ಆಗ ಈ ಶಾಸಕರು ಶ್ರೀರಾಮುಲು ಪಕ್ಷದೊಂದಿಗೆ ಗುರುತಿಸಿಕೊಳ್ಳಲಿದ್ದಾರೆ ಎಂಬುದು ರಾಮುಲು ಬೆಂಬಲಿಗ ಮುಖಂಡರ ಅನಿಸಿಕೆ. ಶ್ರೀರಾಮುಲು ಹೊಸ ಪಕ್ಷದ ಪರಿಕಲ್ಪನೆ ಬಿಂಬಿಸುವ ನಿಟ್ಟಿನಲ್ಲಿ ಉಪವಾಸ ಸಮಾವೇಶ ರೂಪುಗೊಂಡಂತೆ ಭಾಸವಾಗುತ್ತಿದೆ. ಒಟ್ಟಿನಲ್ಲಿ ಶ್ರೀರಾಮುಲು ಕೈಗೊಂಡಿರುವ ಉತ್ತರಕ್ಕಾಗಿ ಉಪವಾಸ ಉ-ಕ ಅಭಿವೃದ್ಧಿ ಕಾಳಜಿ ಜತೆಗೆ ರಾಜಕೀಯವಾಗಿ ಮಹತ್ವದ ತಿರುವಿಗೆ ಕಾರಣವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.