For Daily Alerts
ಮಡೆಸ್ನಾನ ನಿಷೇಧಿಸಿದರೆ ಅಭ್ಯಂತರವಿಲ್ಲ : ಪೇಜಾವರಶ್ರೀ
ಪೇಜಾವರ ಶ್ರೀಗಳು ವಿದ್ಯಾನಗರದಲ್ಲಿ ಅಖಿಲ ಕರ್ನಾಟಕ ಮಾಧ್ವ ಮಹಾಮಂಡಳ ಹಾಸ್ಟೆಲ್ ಉದ್ಘಾಟಿಸಲು ಬುಧವಾರ ಇಲ್ಲಿಗೆ ಬಂದಾಗ ಈ ನುಡಿಗಳನ್ನು ಹೇಳಿದ್ದಾರೆ. ಆದರೆ, ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ಥಳೀಯರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು ಎಂದು ಸರಕಾರಕ್ಕೆ ಕಿವಿಮಾತು ಹೇಳಿದರು.
ಈ ಆಚರಣೆಯನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಕಳೆದ ನಾಲ್ಕು ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಆಚರಿಸುತ್ತಿರುವವರ ಭಾವನೆಗಳೊಂದಿಗೆ ತಳಕು ಹಾಕಿಕೊಂಡಿದೆ. ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವಾಗ ಸಾಕಷ್ಟು ಚಿಂತನೆ ನಡೆಸಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪೇಜಾವರ ಶ್ರೀಗಳು ಉಂಡ ಎಲೆಯ ಮೇಲೆ ಉರುಳು ಸೇವೆ ಮಾಡಲಿ ಎಂದು ಕಾಂಗ್ರೆಸ್ ಸಂಸದ ಎಚ್ ವಿಶ್ವನಾಥ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮಡೆಸ್ನಾನ ಹುಬ್ಬಳ್ಳಿ ಉರುಳು ಸೇವೆ ಸ್ವಾಮೀಜಿ ಪೇಜಾವರಶ್ರೀ ಜಿಲ್ಲಾಸುದ್ದಿ madesnana urulu seve hubballi swamiji pejawar seer
English summary
Pejawar Sri Vishvesha Teertha Swamiji has asserted that if govt bans controversial Madesnana, he will have no objection. He was in Hubballi to inaugurate Akhila Karnataka Madhwa Mahamandal hostel in Hubballi.
Story first published: Thursday, December 8, 2011, 18:35 [IST]