ಜನರಲ್ಲಿ ಭೀತಿ ಹುಟ್ಟಿಸುವ ಸಚಿವೆ ಶೋಭಾ
"ಈ ವಿಚಾರವನ್ನು ತಾವು ದಿಲ್ಲಿ ನಾಯಕರ ಜೊತೆ ಚರ್ಚಿಸಲಿದ್ದೇವೆ ಎಂದಿರುವ ಅವರು, ಸಚಿವೆ ಶೋಭಾ ರಾಜ್ಯದ ಜನತೆ ದಾರಿ ತಪ್ಪಿಸುತ್ತಿರುವುದಲ್ಲದೆ ವಿದ್ಯುತ್ ಆಂತಕ ಸೃಷ್ಟಿಗೂ ಕಾರಣರಾಗಿದ್ದಾರೆ" ಎಂದು ಆರೋಪಿಸಿದ್ದಾರೆ.
"ಬಿಜೆಪಿ ಆಕೆಗೆ ಸಾಕಷ್ಟು ಅಧಿಕಾರ ಮತ್ತು ಸ್ವಾಯತ್ತತೆ ನೀಡಿದ್ದರೂ ಇಂಧನ ವಿಲೇವಾರಿ ವಿಷಯದಲ್ಲಿ ಅಸಮರ್ಥರಾಗಿದ್ದಾರೆ. ಕರ್ನಾಟಕದ ಮಂದಿಗೆ ಆಕೆ ಭೀತಿ ಹುಟ್ಟಿಸುತ್ತಿದ್ದಾರೆ.
ಇದುವರೆಗಿನ ಯಾವುದೇ ಇಂಧನ ಸಚಿವರು ರಾಜ್ಯದ ಜನತೆಯ ಇಂಧನ ಭದ್ರತೆ ಕಸಿದುಕೊಳ್ಳುವ ಪ್ರಯತ್ನ ನಡೆಸಿಲ್ಲ. ಆದರೆ ಶೋಭಾ ಅವರು ಆ ಕೆಲಸ ಮಾಡುತ್ತಿದ್ದಾರೆ ಎಂದು ರೈಹೇಳಿದ್ದಾರೆ.
"ಶೋಭಾಗೆ ಮಹತ್ವದ ಖಾತೆ ನೀಡಲಾಗಿದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಂಧನ ವಿಷಯದಲ್ಲಿ ಅಂತರ್ -ರಾಜ್ಯ ಸಂಬಂಧದ ದುರಾಡಳಿತದಿಂದ ಎಲ್ಪಿಜಿ ಗೊಂದಲ ಉಂಟಾಗಿದೆ" ಎಂದು ರೈ ಹೇಳಿದ್ದಾರೆ.
"ಎಲ್ಪಿಜಿ ಸಂಪರ್ಕ ಕಸಿದುಕೊಳ್ಳಲು ಪ್ರಯತ್ನ ಮುಂದುವರಿಸಿರುವ ಶೋಭಾ, ಇದೀಗ ಬೆಂಗಳೂರಿಗೆ ದಿನಪೂರ್ತಿ ವಿದ್ಯುತ್ ಘೋಷಿಸಿ, ಇತರ ಮಹಾನಗರಗಳಿಗೆ ವಿದ್ಯುತ್ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದಾರೆ" ಎಂದು ಖಾದರ್ ಟೀಕಿಸಿದ್ದಾರೆ.
ಸಾಮಾನ್ಯ ಜನತೆಯ ಬಗ್ಗೆ ಕಾಳಜಿ ಇಲ್ಲದ ಆಕೆ, ದಂತದ ಅರಮನೆಯಲ್ಲಿ ಕುಳಿತು ವಿದ್ಯುತ್ ನೀತಿ ರೂಪಿಸುತ್ತಿದ್ದಾರೆ. ಆಕೆ ಒಮ್ಮೆ ಹಳ್ಳಿಗೆ ಬಂದು ಪರಿಸ್ಥಿತಿಯ ಅವಲೋಕನ ಮಾಡಲಿ ಎಂದು ಯುಟಿ ಖಾದರ್ ಸವಾಲು ಹಾಕಿದ್ದಾರೆ.