ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಷ್ಟಕ್ಕೂ ಯಡಿಯೂರಪ್ಪ ಬಂಧನದ ಬಗ್ಗೆ 'ಅನಂತ' ಮೌನ ಏಕೆಂದರೆ

By Srinath
|
Google Oneindia Kannada News

bsy-jailed-but-hn-ananth-kumar-keeps-mum
ಬೆಂಗಳೂರು‌, ಅ.18: ಇಷ್ಟಕ್ಕೂ ಯಡಿಯೂರಪ್ಪ ಬಂಧನದ ಬಗ್ಗೆ ಸಂಸದ ಎಚ್. ಅನಂತಕುಮಾರ್ ಯಾಕೆ ಆ ಪಾಟಿ ಮೌನವಾಗಿದ್ದಾರೆಂದರೆ... ಅವರೀಗ ಭಾವಿ ಪ್ರಧಾನಿ ಲಾಲ ಕೃಷ್ಣ ಅಡ್ವಾಣಿ ಅವರ ಜನಚೇತನ ಯಾತ್ರೆಯ ಸಾರಥಿಯಾಗಿ ಬ್ಯುಸಿಯಾಗಿದ್ದಾರೆ. ಎಲ್.ಕೆ. ಅಡ್ವಾಣಿ ಅವರ ಬ್ಲೂ-ಐಯ್ಡ್ ಬಾಯ್ ಅನಂತಕುಮಾರ್ ಅವರು ಜನಚೇತನ ಯಾತ್ರೆಯ ನಿಮಿತ್ತ ದೇಶದ ಉದ್ದಗಲಕ್ಕೂ ಸಂಚರಿಸುತ್ತಿದ್ದಾರೆ.

ಆದ್ದರಿಂದ ಕರ್ನಾಟಕದಲ್ಲೇನಾಗುತ್ತಿದೆ ಎಂಬುದರ ಗೊಡವೆ ಅವರಿಗೆ ಬೇಡವಂತೆ. ಮೊದಲು ರಥ ಯಾತ್ರೆ, ನಂತರ ಜೈಲು ಯಾತ್ರೆ ಎಂಬ ಸರಳ ಸಿದ್ಧಾಂತ ಅವರದಾಗಿದೆಯಂತೆ. ಅದಕ್ಕಿಂತ ಹೆಚ್ಚಿಗೆ ಯಡಿಯೂರಪ್ಪ ಬಂಧನದ ಬಗ್ಗೆ ಅಡ್ವಾಣಿ ಅವರೇ 'ಚುಪ್ ಹೊ' ಎಂದು ಅನಂತಿಯನ್ನು ಗದರಿಕೊಂಡಿದ್ದಾರೆ.

ಜತೆಗೆ ಸ್ವತಃ ಅವರೂ ಯಾವುದೇ ಹೇಳಿಕೆ ನೀಡದೆ ಸುಮ್ಮಗಿದ್ದಾರೆ. ಅಷ್ಟೇ ಅಲ್ಲ, 'ಯಡಿಯೂರಪ್ನ ಜತೆ ಸೇರಬೇಡ' ಎಂದು ಸ್ವತಃ ಅಡ್ವಾಣಿ ಅವರೇ ಅನಂತಿಗೆ ಹೇಳಿ ಯಾವುದೋ ಕಾಲವಾಗಿದೆ.

ಆದ್ದರಿಂದ ಮನೆಯಜಮಾನ ಗದರಿಕೊಂಡಿರುವಾಗ ನನ್ನದೇನು ತಲೆಹರಟೆ ಎಂದು 'ಹಕ್ಕ' ಜೈಲು ಹಕ್ಕಿಯಾಗಿರುವ ಬಗ್ಗೆ 'ಬುಕ್ಕ' ಈ ಪರಿ ಕಾಷ್ಠ ಮೌನಕ್ಕೆ ಶರಣಾಗಿದ್ದಾರಂತೆ.

English summary
In spite his close friend, the former Karnataka chief minister BS Yeddyurappa is arrested BJP senior leader LK Advani's close aide HN Ananth Kumar maintains silence, as he is busy with 'Jan Chetna Yatra' of BJP leader L.K. Advani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X