ಪಡುವಾರಹಳ್ಳಿಯಲ್ಲಿ ಪತ್ನಿಯಿಂದ ಪತಿಯ ಹತ್ಯೆ?
ವಿಠಲ್ ಹಾಗೂ ಆತನ ಪತ್ನಿ ಮಂಗಳಗೌರಿ ಪಡುವಾರಹಳ್ಳಿಯಲ್ಲಿ ಕೆಲವು ಸಮಯಗಳಿಂದ ವಾಸಿಸುತ್ತಿದ್ದರು. ವಿಠಲ್ ಟೈಲರ್ ಕೆಲಸ ಮಾಡಿ ಸಂಸಾರ ನಿರ್ವಹಣೆ ಮಾಡುತ್ತಿದ್ದ. ಈ ನಡುವೆ ಇವರ ಮನೆ ಪಕ್ಕವೇ ತಮಿಳುನಾಡು ಮೂಲದ ವೆಂಕಟೇಶ್ ಎಂಬಾತ ಬಾಡಿಗೆ ಮನೆ ಮಾಡಿಕೊಂಡಿದ್ದ. ಮನೆ ಪಕ್ಕದವನಾದುದರಿಂದ ಮಂಗಳಗೌರಿ ಹಾಗೂ ವೆಂಕಟೇಶ್ ನಡುವೆ ಪರಿಚಯವಾಗಿತ್ತು. ಆದರೆ ಪರಿಚಯ ಪ್ರೇಮಕ್ಕೆ ತೆರಳಿದ್ದು ಆತನಿಗೆ ಮಂಗಳಗೌರಿಯೇ ಮನೆಯಿಂದ ಊಟ ತಿಂಡಿ ಮಾಡಿಕೊಡುತ್ತಿದ್ದಳು ಎನ್ನಲಾಗಿದೆ.
ವೆಂಕಟೇಶ್ ಪರಿಚಯವಾದ ಬಳಿಕ ಮಂಗಳಗೌರಿ ಹಾಗೂ ವಿಠಲ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಬುಧವಾರ ವಿಠಲ್ ಮೃತದೇಹ ರಕ್ತದ ಮಡುವಿನಲ್ಲಿ ಗೋಚರಿಸಿದ್ದು ಈತನ ಹತ್ಯೆ ಹೇಗಾಯಿತು ಎಂಬುವುದು ನಿಗೂಢವಾಗಿ ಉಳಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಪತ್ನಿ ಮಂಗಳಗೌರಿ ಹಾಗೂ ವೆಂಕಟೇಶ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ತನಿಖೆ ಬಳಿಕವಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. [ಮದುವೆ ಯಾಕೆ ಸಾಯುತ್ತಿವೆ : ರವಿ ಬೆಳಗೆರೆ ಲೇಖನ]