ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೈದಿಗಳಿಗೆ ಬ್ಯಾಂಕ್ನ ಕೆಲಸ ಹೊರಗುತ್ತಿಗೆ
ಈ ಕಾರಾಗೃಹದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮತ್ತು ವಿಚಾರಣಾಧೀನ 250 ಕೈದಿಗಳಿಗೆ ಕಂಪ್ಯೂಟರ್ ನ ತರಬೇತಿ ನೀಡಿ ಭಾರತೀಯ ಬ್ಯಾಂಕ್ ಹಾಗೂ ವಿಮಾ ಕಂಪೆನಿಗಳ ಕೆಲಸ ಮಾಡಿಸಲು ಕಂಪೆನಿ ಯೋಜನೆ ಹಾಕಿಕೊಂಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೊರಗುತ್ತಿಗೆ ಕಂಪೆನಿ ರೇಡಿಯಂಟ್ ಇನ್ಫೋ ಸಿಸ್ಟಮ್ಸ್ ನ ನಿರ್ದೇಶಕ ಸಿ ನಾರಾಯಣಾಚಾರಿಲು ಅವರು, ಚೆರ್ಲಪಲ್ಲಿ ಜೈಲಿನಲ್ಲಿರುವ 200 ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ಜ್ಞಾನವಿದೆ ಎಂದರು.
ಕಂಪೆನಿಯ ಈ ಕಾರ್ಯಕ್ಕೆ ಸಹಮತ ನೀಡಿರುವ ಜೈಲು ಇಲಾಖೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಪಿ ನರಸಿಂಹ ರೆಡ್ಡಿ ಅವರು ನಂಬಲರ್ಹ ಕೈದಿಗಳಿಗೆ ಮಾತ್ರ ಹೊರಗುತ್ತಿಗೆ ಕೆಲಸ ವಹಿಸಲು ನಿರ್ಧರಿಸಲಾಗಿದ್ದು, ಬ್ಯಾಂಕ್ ನ ಗ್ರಾಹಕರೊಂದಿಗೆ ಮಾತನಾಡಲು ಅಥವಾ ದೂರವಾಣಿಯಲ್ಲಿ ಮಾತನಾಡಲು ಕೈದಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ಈ ಪ್ರಸ್ತಾವನೆಯಲ್ಲಿ ಭದ್ರತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುವುದು ಈ ಹೊರಗುತ್ತಿಗೆಯಿಂದ ಕಂಪೆನಿಗಳಿಗೆ ಅಗ್ಗದ ದರದಲ್ಲಿ ಕೆಲಸಗಾರರು ಲಭ್ಯವಾದಂತಾಗುತ್ತದೆ ಎಂದು ಹೇಳಿದರು.
Comments
ಜೈಲು ಉದ್ಯೋಗ ಹೊರಗುತ್ತಿಗೆ ಬಿಪಿಒ ಐಟಿ ಕೈದಿ ಹೈದರಾಬಾದ್ ವಾಣಿಜ್ಯ bpo call centre prisoners hyderabad jail finance news
Story first published: Friday, May 14, 2010, 17:29 [IST]