ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿಯಲ್ಲಿ ಭಾರತೀಯ ರಾಯಭಾರಿಗಳ ಸಭೆ

By Staff
|
Google Oneindia Kannada News

ನವದೆಹಲಿ, ಡಿ. 22 : ಮುಂಬೈ ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಇಂದು ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 120 ಮಂದಿ ಭಾರತೀಯ ರಾಯಭಾರಿಗಳ ಮಹತ್ವ ಸಭೆಯನ್ನು ಕರೆದಿದೆ.

ಈ ಮೂಲಕ ಪಾಕಿಸ್ತಾನದಲ್ಲಿರುವ ಉಗ್ರರ ಹುಟ್ಟಡಗಿಸುವುದು ಸೇರಿದಂತೆ ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ನೀಡಿದರೂ ಹಳೆಯ ರಾಗ ಹಾಡುತ್ತಿರುವ ಪಾಕ್ ಮೇಲೆ ಅಂತಾರಾಷ್ಟ್ರೀಯ ಸಮೂಹದಿಂದ ತೀವ್ರ ಒತ್ತಡ ಹೇರುವುದು ಸಭೆಯ ಪ್ರಮುಖ ಚರ್ಚೆಯ ವಿಷಯವಾಗಿದೆ. ಸಭೆಯ ನೇತೃತ್ವವನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಹಿಸಲಿದ್ದಾರೆ. ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಗೃಹ ಸಚಿವ ಪಿ ಚಿದಂಬರಂ ಕೂಡ ಸಭೆಯಲ್ಲಿ ಪಾಲ್ಗೊಳ್ಳುವರು. ಮನಮೋಹನ್ ಸಿಂಗ್ ಕೆಲ ಮಹತ್ವದ ಸಂಗತಿಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

ಪಾಕ್ ಮೇಲೆ ಭಾರತದ ದಂಡೆತ್ತಲಿದೆ ಎಂದು ಜಾಗತಿಕ ಗುಪ್ತಚರ ಇಲಾಖೆ ಬಹಿರಂಗಪಡಿಸಿರುವ ಬೆನ್ನಲ್ಲೇ ಇಂದು ನವದೆಹಲಿಯಲ್ಲಿ ನಡೆಯಲಿರುವ ಸಭೆ ಭಾರಿ ಮಹತ್ವದ ಪಡೆದುಕೊಂಡಿದೆ. ಮುಂಬೈ ಭಯೋತ್ಪಾದನೆಯಿಂದ ಭಾರತ ಮತ್ತು ಪಾಕ್ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಯಾವ ಕ್ಷಣದಲ್ಲಿ ಬೇಕಾದರೂ ಯುದ್ದ ನಡೆಯಬಹುದು ಎನ್ನಲಾಗಿದೆ.

ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಭಾರತ ಎಂತಹ ಕ್ರಮಗಳನ್ನೂ ಕೈಗೊಳ್ಳಲು ಹಿಂಜರೆಯುವುದಿಲ್ಲ ಎಂದು ಹೇಳಿದರೆ, ಭಾರತದ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿದೆ ಎಂದು ಪಾಕ್ ಅಧ್ಯಕ್ಷ ಆಸೀಫ್ ಅಲೀ ಜರ್ದಾರಿ ತಿರುಗೇಟು ನೀಡಿದ್ದಾರೆ. ಅಮೆರಿಕ ಸೇರಿದಂತೆ ಜಗತ್ತಿನ ದೊಡ್ಡಣ್ಣ ರಾಷ್ಟ್ರಗಳು ಭಾರತ ಪರ ನಿಂತಿವೆ.

(ದಟ್ಸ್ ಕನ್ನಡ ವಾರ್ತೆ)
ಯಾವುದೇ ಕ್ಷಣದಲ್ಲಿ ಭಾರತ ಪಾಕ್ ಯುದ್ಧ
ಟಾಟಾರಿಂದ ಭಯೋತ್ಪಾದಕ ನಿಗ್ರಹ ಪಡೆ ರಚನೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X