ಹುಕ್ಕೇರಿಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ?
ಬೆಂಗಳೂರು,
ಡಿ.
9
:
ಹುಕ್ಕೇರಿ
ವಿಧಾನಸಭೆ
ಕ್ಷೇತ್ರದ
ಉಪಚುನಾವಣೆಯಲ್ಲಿ
ಜೆಡಿಎಸ್
ಅಭ್ಯರ್ಥಿಯನ್ನೇ
ಕಾಂಗ್ರೆಸ್
ಅಭ್ಯರ್ಥಿಯಾಗಿಸಲು
ಜೆಡಿಎಸ್
ನಿರ್ಧರಿಸಿದೆ.
ಸುಮಾರು
13
ವರ್ಷಗಳ
ಕಾಲ
ಬೆಳಗಾವಿಯ
ಜಿಲ್ಲಾ
ಸಹಕಾರಿ
ಬ್ಯಾಂಕ್
ಅಧ್ಯಕ್ಷರಾಗಿದ್ದ
ಸಿ
ಬಿ
ಪಾಟೀಲ್
ಅವರನ್ನು
ಜೆಡಿಎಸ್
ಕಣಕ್ಕಿಸಲು
ನಿರ್ಧರಿಸಲಾಗಿತ್ತು.
ಆದರೆ
ಇವರನ್ನೇ
ಕಾಂಗ್ರೆಸ್
ಅಭ್ಯರ್ಥಿಯಾಗಿಸಿದರೆ
ಪರೋಕ್ಷವಾಗಿ
ಬೆಂಬಲ
ನೀಡುವುದಾಗಿ
ಜೆಡಿಎಸ್
ಭರವನೆ
ನೀಡಿದೆ.
ಈ ಹಿಂದೆ ಮಾಜಿ ಸಚಿವ ಎ ಬಿ ಪಾಟೀಲ್ ಅವರನ್ನು ಜೆಡಿಎಸ್ ನಿಂದ ಕಣಕ್ಕಿಸಲು ಯತ್ನಿಸಲಾಗಿತ್ತು. ಆದರೆ ಕಾಂಗ್ರೆಸ್ ಶಾಸಕರಾದ ವಿ ಸೋಮಣ್ಣ ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ್ ಕತ್ತಿ ಗೆಲುವು ಸುಲಭವಾಗಲಿ ಎಂಬ ಕಾರಣಕ್ಕೆ ಎ ಬಿ ಪಾಟೀಲ್ ಕಣಕ್ಕಿಳಿಯದಂತೆ ಮಠಾಧೀಶರಿಂದ ಒತ್ತಡ ಹೇರಿದ್ದರು ಎನ್ನುವ ಮಾತುಗಳು ವ್ಯಾಪಕವಾಗಿ ಹರಡಿವೆ.
ಇದೇ ಕಾರಣದಿಂದ ಪಾಟೀಲ್ ಕೊನೆಗಳಿಗೆವರೆಗೂ ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆಗೆ ಮಾತುಕತೆ ನಡೆಸಿ ಎರಡೂ ಪಕ್ಷದವರಿಗೂ ಸೂಕ್ತ ಅಭ್ಯರ್ಥಿ ಸಿಗದಂತೆ ನೋಡಿಕೊಂಡರು ಎನ್ನುವ ಗಾಳಿ ಸುದ್ದಿಯೂ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಕತ್ತಿ ಅವರನ್ನು ಸೋಲಿಸಲು ತಮ್ಮ ಪಕ್ಷದ ಅಭ್ಯರ್ಥಿಯಾಗಲು ಬಯಸಿದ್ದ ಸಿ ಬಿ ಪಾಟೀಲ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದರೆ, ತಾವು ಬೆಂಬಲ ನೀಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಕೂಡಾ ಸಂಪರ್ಕಿಸಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
(ದಟ್ಸ್
ಕನ್ನಡ
ವಾರ್ತೆ)
ಬೆಳಗಾವಿಯಲ್ಲಿ
ಉಮೇಶ್
ಕತ್ತಿ
ನಾಮಪತ್ರ
ಸಲ್ಲಿಕೆ