ಹದಗಡಲೆಯಾ? ನನಗೆರಡಿರಲಿ ಎನ್ನುವ ಕನ್ನಡ ಮನೋಧರ್ಮವು !
*ಎಸ್ಕೆ. ಶಾಮಸುಂದರ, Email : [email protected]
ಬೆಂಗಳೂರಿನಲ್ಲಿರುವ ವೃತ್ತಿಪರರಿಗೆ ಮೀಸಲಾದ ಒಂದು ಸಂಸ್ಥೆಯಲ್ಲಿ ನಡೆದ ‘ವಿಚಿತ್ರ ಆದರೆ , ಸತ್ಯ’ ಸಂಗತಿ ಇದು :
ಅದೊಂದು ಸಹಕಾರ ಸಂಸ್ಥೆ. ಸಂಘ ಸ್ಥಾಪನೆ ಉದ್ದೇಶದ ಪ್ರಕಾರ ವೃತ್ತಿ ಪರರು ಮಾತ್ರ ಅದಕ್ಕೆ ಸದಸ್ಯರಾಗಬಹುದು. ಆ ವೃತ್ತಿಯಲ್ಲಿ ತೊಡಗಿರುವವರ ಸಂಖ್ಯೆ ಸರಿಸಮಾರು 1600. ಆದರೆ ನೊಂದಾಯಿತರ ಸಂಖ್ಯೆ ಮಾತ್ರ 322 !
ತಿಪ್ಪರಲಾಗ ಹಾಕಿದರೂ ನಮ್ಮ ಜನ ಒಪ್ಪುತ್ತಿಲ್ಲ. ಅಯ್ಯೋ ಬಿಡ್ರಿ, ನಮಗೇನಾಗಬೇಕಾಗಿದೆ ಅದರಿಂದ ಎನ್ನುವ ಅಸಡ್ಡೆಯ ಮಾತು. ಮನರಂಜನೆ ಬೇಕಿದ್ದರೆ ಬೆಂಗಳೂರಿನಲ್ಲಿ ಏನು ಬರವಾ ? ಎಲ್ಲಿ ಬೇಕಾದರೂ ಹೋಗಬಹುದು, ಬೇಕಾದ್ದು ತಿನ್ನಬಹುದು ಎನ್ನುವ ಉದಾಸಿನ.
ಮುಂದೆ ನಿಂತು ಸಂಘದ ಕೆಲಸ ಮಾಡುವವರಿಗೆ ಏನೆನಿಸಬೇಡ. ಬಿಡ್ರೀ ನಮಗ್ಯಾಕೆ , ಊರು ದನ ಕಾದು ದೊಡ್ಡ ಬೋರೇಗೌಡ ಎನಿಸಿಕೊಳ್ಳುವ ಉಸಾಬರಿಯೇ ಬೇಡ ಅಂದುಕೊಂಡು ಕೆಲವು ಪದಾಧಿಕಾರಿಗಳು ಸುಮ್ಮನಾಗಿಬಿಟ್ಟರು. ಆದರೆ ಎಲ್ಲರೂ ಅವರಂತಲ್ಲ ವಲ್ಲ . ಅಲೆ ಇವನ ! ಕೈಯಲ್ಲಾಗಲ್ಲ ಅಂತ ಸುಮ್ಮನಿದ್ದರೆ ಕೆಲಸವಾಗುವುದಾದರೂ ಎಂತು. ಬಡ್ಡೀಮಕ್ಕಳಿಗೆ ಇವತ್ತು ಗೊತ್ತಾಗಲ್ಲ, ಇವರಿಗೆ ಏನು ಮಾಡ್ಬೇಕು ಅಂತ ಗೊತ್ತಿದೆ ತಡಿ ಅಂದವನೇ , ಕಾರ್ಯದರ್ಶಿಯೆಂಬ ಉರುಳನ್ನು ಕೊರಳಿಗೆ ಕಟ್ಟಿಕೊಂಡಿದ್ದ ತಿಮ್ಮೇಶಿ (ಹೆಸರನ್ನು ಕೊಂಚವೇ ಬದಲಾಯಿಸಲಾಗಿದೆ) ಮಾಸ್ಟರ್ ಪ್ಲ್ಯಾನ್ ಹಾಕಿದ.
ಮಾರನೇ ದಿನ ಕಛೇರಿಗೆ ಬಂದವನೇ ಒಂದು ಸುತ್ತೋಲೆ ಹೊರಡಿಸಿದ. ಹೊಸ ಪ್ಲ್ಯಾನಿನ ಅಂದಾಜು ಹೀಗಿತ್ತು.
- xxxx99ÄÍÜ A®ÜÌáÊÝWÜáÊÜÍÑæ ÖæÓÜÝX aÜÍÝÝÝWÜ ŸáÓÜáÊÜÊÜÄWæ PæÆÊÜ" ÄÞ;ÀáWÜÚÊæ. AÜÜÈÉ ÜÅÊÜááSÊÝÜÜá ÜávÜáx. wÓèRÍp… PævÜÇÝWÜáÊÜ"Üá. gÑæWæ ÖÜÑÜá ÊÜÐÜì PæÙÜX®Ü CŸÜá ÊÜáPÜRÚWæ Class worknote book , FREE
- ನಾವು ಸರಕಾರದೊಂದಿದೆ ಸಮಾಲೋಚನೆ ನಡೆಸುತ್ತಿದ್ದೇವೆ. ಸಂಘದ ಪ್ರತಿಯಾಬ್ಬ ಸದಸ್ಯರೂ ಒಂದು ನಿವೇಶನ ಹೊಂದಿರಲೇಬೇಕು ಎನ್ನುವುದು ಸಂಘದ ಕಳಕಳಿ. ಸರಕಾರ ಮನಸ್ಸು ಮಾಡಿದರೆ ನೀವು ಸುಲಭವಾಗಿ ನಿವೇಶನದ ಒಡೆಯರಾಗಬಹುದು.
- ಕೊನೆಯದು. ಆದರೆ ಅತೀ ಮುಖ್ಯವಾದದ್ದು ಆರೋಗ್ಯ ವಿಮೆ. ವರ್ಷಕ್ಕೆ ನೀವು ಇಂತಿಷ್ಟು ಅಂತ ಕಟ್ಟಿಬಿಟ್ಟರೆ ಮುಗಿಯಿತು. ನೀವು ಹಾಗೂ ನಿಮ್ಮ ಕುಟುಂಬದ ಎಲ್ಲ ರಿಗೆ ಆರೋಗ್ಯ, ಆಸ್ಪತ್ರೆ ಸಮಸ್ಯೆಗಳಿಗೆ ಧನ ಸಹಾಯ ಸಿಗುತ್ತದೆ.
ನಾನೇಕೆ ಇವತ್ತು ಈ ಉದಾಹರಣೆ ಕೊಡುತ್ತಿದ್ದೇನೆ ಎನ್ನುವುದು ನಿಮಗೆ ಈ ಹೊತ್ತಿಗೆ ಗೊತ್ತಾಗಿರಬಹುದು. ಸಹಕಾರ ಸಂಘವಾಗಲೀ, ನಾಗರಿಕ ವೇದಿಕೆಯಾಗಲೀ, ಕನ್ನಡ ಸಂಘ ಸಂಸ್ಥೆಯಾಗಲೀ ಸೊರಗಿ ಸಾಯುವುದಕ್ಕೆ ನಮ್ಮ ಕನ್ನಡಿಗರ ಮನೋಧರ್ಮ ಮುಖ್ಯ ಕಾರಣ. ಹದಗಡಲೆ ಎಂದರೆ ನನಗೆರಡು ಕೊಡಿ ಅಂದನಂತೆ ಎನ್ನುವುದೊಂದು ಗಾದೆ. ಅಂತೆಯೇ ನಾವು . ಏನಾದರೂ ಸಿಗತ್ತೆ ಅಂದ್ರೆ ನಾನು ಮೊದಲು ಎನ್ನುವವರು. ನನ್ನಿಂದ ಸಂಘಕ್ಕೆ ಏನು ಹೆಲ್ಪ್ ಆಯಿತು ಎಂಬ ಪ್ರಶ್ನೆ ಕೇಳಿಕೊಳ್ಳುವುದಕ್ಕೆ ಮರೆತವರು.
ನಾಳೆ ಮತ್ತೆ ಸಿಗುತ್ತೇನೆ
ನಮಸ್ಕಾರ