ದೆಹಲಿಯಲ್ಲಿ ಸೆರೆ ಸಿಕ್ಕ ಇಂಡಿಯನ್ ಮುಜಾಹಿದೀನ್ ಉಗ್ರ
ನವದೆಹಲಿ, ಫೆಬ್ರವರಿ 14 : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕನನ್ನು ಬಂಧಿಸಲಾಗಿದೆ. 5ಕ್ಕೂ ಹೆಚ್ಚು ಸ್ಫೋಟ ಪ್ರಕರಣದಲ್ಲಿ ಉಗ್ರ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.2008ರಿಂದ ಈತ ತಲೆಮರೆಸಿಕೊಂಡಿದ್ದ.
ದೆಹಲಿ ಪೊಲೀಸ್ ವಿಶೇಷ ವಿಭಾಗದ ತಂಡ ಬುಧವಾರ ದೆಹಲಿಯಲ್ಲಿ ಆರಿಜ್ ಖಾನ್ ಅಲಿಯಾಸ್ ಜುನೈದ್ ಎಂಬ ಭಯೋತ್ಪಾದಕನನ್ನು ಬಂಧಿಸಿದೆ. ಜುನೈದ್ಗಾಗಿ ಎನ್ಐಎ ಮತ್ತು ದೆಹಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಕಾಶ್ಮೀರ: ಶಂಕಿತ ಮಹಿಳಾ ಆತ್ಮಹತ್ಯಾ ಬಾಂಬರ್ ಬಂಧನ
ಜುನೈದ್ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸದಸ್ಯನಾಗಿದ್ದಾನೆ. 5ಕ್ಕೂ ಹೆಚ್ಚು ಸ್ಫೋಟ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಜುನೈದ್ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ಬಹುಮಾನವನ್ನು ಎನ್ಐಎ ಘೋಷಣೆ ಮಾಡಿತ್ತು.
ದೆಹಲಿ ಪೊಲೀಸರು ಉಗ್ರನ ವಿಚಾರಣೆ ನಡೆಸುತ್ತಿದ್ದಾರೆ. ಜುನೈದ್ ರಾಷ್ಟ್ರೀಯ ತನಿಖಾ ದಳದ ಮೋಸ್ಟ್ ವಾಟೆಂಡ್ ಪಟ್ಟಿಯಲ್ಲಿದ್ದ. ಆದ್ದರಿಂದ, ಅವರು ಸಹ ಉಗ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಭಯೋತ್ಪಾದಕರು ಹುತಾತ್ಮರಂತೆ, ಅವರ ಸಾವನ್ನು ಸಂಭ್ರಮಿಸಬಾರದಂತೆ!
32 ವರ್ಷದ ಜುನೈದ್ 2008ರ ಬಾಟ್ಲಾಹೌಸ್ ಎನ್ಕೌಂಟರ್ ಬಳಿಕ ತಲೆಮರೆಸಿಕೊಂಡಿದ್ದ. ಎನ್ಕೌಂಟರ್ ವೇಳೆ ಇಬ್ಬರು ಇಂಡಿಯನ್ ಮುಜಾಹಿದೀನ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು, ಜುನೈದ್ ಪರಾರಿಯಾಗಿದ್ದ.
ದೆಹಲಿ ಪೊಲೀಸ್ ವಿಶೇಷ ವಿಭಾಗದ ಡಿಸಿಪಿ ಪಿ.ಎಸ್.ಕುಶ್ವಾಲ್ ಉಗ್ರನ ಬಂಧನವನ್ನು ಖಚಿತ ಪಡಿಸಿದ್ದಾರೆ. '2008ರಿಂದ ತಲೆಮರೆಸಿಕೊಂಡಿದ್ದ ಉಗ್ರನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಮೂಲದ ಜುನೈದ್ ಇಂಜಿನಿಯರ್ ಆಗಿದ್ದ. ಇಂಡಿಯನ್ ಮುಜಾಹಿದೀನ್ ಸೇರಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ' ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.