ಕನ್ನಡಿಗರ ಪ್ರೀತಿ, ಸ್ವಾಗತಕ್ಕೆ ಧನ್ಯವಾದ ಹೇಳಿದ ರಾಹುಲ್ ಗಾಂಧಿ
ಬೆಂಗಳೂರು, ಫೆಬ್ರವರಿ 13: ತಮ್ಮ ನಾಲ್ಕು ದಿನಗಳ ಕರ್ನಾಟಕ ರಾಜ್ಯ ಪ್ರವಾಸವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಅಂತ್ಯಗೊಳಿಸಿದ್ದಾರೆ. ಪ್ರವಾಸದ ನಂತರ ದೆಹಲಿಗೆ ಮರಳಿದ ರಾಹುಲ್ ಕನ್ನಡಿಗರ ಪ್ರೀತಿ ಮತ್ತು ಆತ್ಮೀಯ ಸ್ವಾಗತಕ್ಕೆ ಧನ್ಯವಾದ ಹೇಳಿದ್ದಾರೆ.
ಫೆ.24ರಿಂದ ಮತ್ತೆ ರಾಹುಲ್ ಗಾಂಧಿ ರಾಜ್ಯ ಪ್ರವಾಸ
ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. 'ಜನಾಶೀರ್ವಾದ ಯಾತ್ರೆ'ಯಲ್ಲಿ ತಾವು ಪಾಲ್ಗೊಂಡಿದ್ದ ಕ್ಷಣಗಳ ವಿಡಿಯೋವನ್ನು ಅವರು ಟ್ವೀಟ್ ಮಾಡಿದ್ದು 'ಧನ್ಯವಾದ ಕರ್ನಾಟಕ' ಎಂದು ಹೇಳಿದ್ದಾರೆ.
Thank you Karnataka for your warmth and affection!
— Office of RG (@OfficeOfRG) February 13, 2018
Here is a short video with some of the highlights of our Yatra.#JanaAashirwadaYatre pic.twitter.com/Ad6fdjkYiC
ವಿಡಿಯೋದ ಜತೆಗೆ, "ನಿಮ್ಮ ಬೆಚ್ಚನೆಯ ಸ್ವಾಗತ ಮತ್ತು ಪ್ರೀತಿಗೆ ಧನ್ಯವಾದ ಕರ್ನಾಟಕ" ಎಂದು ಟ್ವೀಟ್ ಮಾಡಿದ್ದಾರೆ.
In Pics : ಬೀದರ ಅನುಭವ ಮಂಟಪದಲ್ಲಿ ಶರಣೆಂದ ರಾಹುಲ್
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗದೇ ಇದ್ದರೂ ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಒಂದು ಸಮಾವೇಶದಲ್ಲಿ ಭಾಗವಹಿಸಿ ನಿರ್ಗಮಿಸಿದ್ದರೆ, ರಾಹುಲ್ ಗಾಂಧಿ ಬರೋಬ್ಬರಿ ನಾಲ್ಕು ದಿನಗಳ ಕಾಲ ಭರ್ಜರಿ ಪ್ರಚಾರ ನಡೆಸಿದ್ದಾರೆ.