ಇಷ್ಟಾರ್ಥ ನೆರವೇರಲು ಶಿವರಾತ್ರಿ ಮರುದಿನ ಇರ್ಪು ಜಲಧಾರೆಯಲ್ಲಿ ಸ್ನಾನ!
ಕೊಡಗು ಜಿಲ್ಲೆ ಮಡಿಕೇರಿಯಿಂದ ಎಂಬತ್ತೈದು ಕಿ.ಮೀ ದೂರವಿರುವ ವೀರಾಜಪೇಟೆ ತಾಲೂಕಿಗೆ ಸೇರಿದ ಇರ್ಪು ಜಲಪಾತದಲ್ಲಿ ಶಿವರಾತ್ರಿ ಮರು ದಿನ ಪವಿತ್ರ ಸ್ನಾನ ಮಾಡಿದರೆ ಶ್ರೇಷ್ಠವಂತೆ. ಅದರಲ್ಲೂ ನವವಿವಾಹಿತರು ಒಟ್ಟಿಗೆ ಮಿಂದರೆ ಇಷ್ಟಾರ್ಥ ನೆರವೇರುತ್ತದೆ
ಶಿವರಾತ್ರಿಗೆ ಶಿವ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯುವುದು ಮಾಮೂಲಿ. ಆದರೆ ಶಿವರಾತ್ರಿಯಂದು ಜಾಗರಣೆ ಮಾಡಿ, ಮಾರನೆ ದಿನ ದಕ್ಷಿಣ ಕೊಡಗಿನ ಇರ್ಪು ಜಲಧಾರೆಯಲ್ಲಿ ಮಿಂದರೆ ಇಷ್ಟಾರ್ಥ ನೆರವೇರುತ್ತದೆ ಇದು ಕೊಡಗಿನವರ ನಂಬಿಕೆಯಾಗಿದೆ. ಹೀಗಾಗಿಯೇ ಇಲ್ಲಿ ನೂಕುನುಗ್ಗಲು ಕಂಡು ಬರುತ್ತದೆ.
ಕೊಡಗಿನಲ್ಲಿ ಹಲವಾರು ಜಲಪಾತಗಳಿದ್ದರೂ ಅವು ನೋಡಲಷ್ಟೆ ಸುಂದರವಾಗಿವೆ. ಆದರೆ ಅವುಗಳ ನಡುವೆ ಇರುವ ಇರ್ಪು ಜಲಪಾತ ಪರಮ ಪವಿತ್ರವಾಗಿದೆ. ಇರ್ಪು ಜಲಪಾತ ಮಡಿಕೇರಿಯಿಂದ 85 ಕಿ.ಮೀ. ದೂರದಲ್ಲಿದ್ದು, ವೀರಾಜಪೇಟೆ ತಾಲೂಕಿಗೆ ಸೇರಿದೆ.[ಅಭಿಷೇಕ ಪ್ರಿಯನಾದ ಶಿವನನ್ನು ಹೇಗೆ ಪೂಜಿಸಿದರೆ ಶ್ರೇಷ್ಠ?]
ಇರ್ಪು ಕ್ಷೇತ್ರದ ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿರುವ ಈ ಜಲಪಾತ ತನ್ನ ಮೋಹಕತೆ, ಕುಲುಕುಲು ಸೌಂದರ್ಯ, ವಯ್ಯಾರದ ನಾಟ್ಯ, ಝುಳುಝುಳು ನಿನಾದದೊಂದಿಗೆ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಮತ್ತೆ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಟಿಸಿದೆ.
ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುತ್ತದೆ. ಮಳೆಗಾಲದಲ್ಲಿ ರಭಸದಿಂದ ಧುಮುಕುವ ಜಲಧಾರೆ ಇದೀಗ ಸೊರಗಿದೆ. ಸಣ್ಣಗೆ ಜಿನುಗುವ ಜಲಧಾರೆಗೆ ತಲೆ ಕೊಟ್ಟು ಮೀಯುವುದು ಎಲ್ಲಿಲ್ಲದ ಮಜಾ ನೀಡುತ್ತಿದೆ.[ಶಿವರಾತ್ರಿಯಲ್ಲಿ 'ರಾತ್ರಿ' ಎಂಬ ಶಬ್ದದ ಪ್ರತೀಕಾರ್ಥ]
ಇರ್ಪು
ಜಲಧಾರೆ
ಏಕೆ
ಪವಿತ್ರ?
ಇನ್ನು
ಜಲಧಾರೆ
ಏಕೆ
ಪವಿತ್ರ?
ಇದರ
ಸೃಷ್ಠಿ
ಹೇಗಾಯಿತು?
ಮೊದಲಾದವುಗಳ
ಬಗ್ಗೆ
ತಿಳಿಯುತ್ತಾ
ಹೋದರೆ
ನಮ್ಮನ್ನು
ತೇತ್ರಾಯುಗಕ್ಕೆ
ಕರೆದೊಯ್ಯುತ್ತದೆ.
ಅದು
ರಾಮಾಯಣದ
ಕಾಲ.
ಸೀತೆಯನ್ನು
ಅರಸುತ್ತಾ
ಹೊರಟ
ರಾಮ-ಲಕ್ಷ್ಮಣರು
ಬ್ರಹ್ಮಗಿರಿಯ
ತಪ್ಪಲಿಗೆ
ಬರುತ್ತಾರೆ.
ಈ
ಬೆಟ್ಟ
ದಾಟಿದರೆ
ಕೇರಳ
ಸೀಮೆ.
ಎಲ್ಲರೂ
ಬೆಟ್ಟ-ಗುಡ್ಡಗಳನ್ನು
ದಾಟಿ
ಶ್ರೀರಾಮ
ಸೇರಿದಂತೆ
ವಾನರರು
ನಡೆಯುತ್ತಿದ್ದರೆ
ಕೋಪಗೊಂಡ
ಲಕ್ಷ್ಮಣ
ಮುಂದಕ್ಕೆ
ಹೆಜ್ಜೆಯಿರಿಸದೆ
ಅಲ್ಲಿಯೇ
ಕುಳಿತುಕೊಂಡನಂತೆ.
ಎಂದೂ ರಾಮನಿಗೆ ಎದುರಾಡದ ಲಕ್ಷ್ಮಣ ಅಂದು ಕೋಪಗೊಂಡು ಕುಳಿತದ್ದೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ ಇರ್ಪು ಹುಟ್ಟಿತೆಂದು ಹೇಳಲಾಗುತ್ತಿದೆ. ಕೆಲ ಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ.[ಶಿವನ ಸತ್ಯ ಪರಿಚಯ, ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ]
ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದ. ಇದರಿಂದ ಸಂತೋಷಗೊಂಡ ಲಕ್ಷ್ಮಣ, ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು (ನಂದಿಸಲು) ಬಾಣ ಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತಂತೆ.
ಈ ರೀತಿ ಸೃಷ್ಟಿಯಾದ ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿ ಎಲ್ಲರೂ ಕುಡಿದು ಸಂತುಷ್ಟಗೊಂಡರಂತೆ. ಆ ಲಕ್ಷ್ಮಣತೀರ್ಥನದಿಯಿಂದ ಸೃಷ್ಟಿಯಾದ ಜಲಧಾರೆಯೇ ಇರ್ಪು ಜಲಪಾತವಾಗಿದೆ. ಹೀಗಾಗಿ ಈ ಜಲಧಾರೆಗೆ ತಲೆ ಕೊಟ್ಟು ಮೀಯುವುದರಿಂದ ಪಾಪ ಕಳೆಯುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.
ಶಿವರಾತ್ರಿಗೆ
ಜಾತ್ರೆ
ಶಿವರಾತ್ರಿಯಂದು
ಇಲ್ಲಿ
ಜಾತ್ರೆ
ನಡೆಸಲಾಗುತ್ತದೆ.
ಈ
ಸಂದರ್ಭದಲ್ಲಿ
ತಾತ್ಕಾಲಿಕವಾಗಿ
ಕಟ್ಟಲಾಗುವ
ಮರದ
ಅಟ್ಟಣಿಗೆಯಲ್ಲಿ
ನಿಂತು
ಮೀಯುವುದು
ರೂಢಿ.
ಹೀಗೆ
ಸ್ನಾನ
ಮಾಡಿದರೆ
ಬೇಡಿದ
ಫಲ
ಒದಗುತ್ತದೆ.
ಅದರಲ್ಲೂ
ನವದಂಪತಿ
ಕೈಕೈ
ಹಿಡಿದು
ಸ್ನಾನ
ಮಾಡಿದರೆ
ಬಯಸಿದ್ದು
ಈಡೇರುತ್ತದೆ
ಎಂಬ
ನಂಬಿಕೆಯೂ
ಜನರಲ್ಲಿದೆ.
ಇರ್ಪು ಜಲಪಾತವನ್ನು ನೋಡಲು ಮಡಿಕೇರಿ ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಅಥವಾ ಹುಣಸೂರು ನಾಗರಹೊಳೆ ಕುಟ್ಟ ಮೂಲಕವೂ ತೆರಳಬಹುದು.