ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಂಡ ಶಾಸಕ!
ಶಾಸಕರು ಅಥವಾ ಮಂತ್ರಿಗಳು ಆತ್ಮಹತ್ಯೆ ಮಾಡಿಕೊಂಡರೆ ರೈತ ಸಂಘಟನೆಗಳ ವತಿಯಿಂದ ಪರಿಹಾರ ನೀಡಲಾಗುತ್ತದೆ ಎನ್ನುವ ಘೋಷಣೆಯನ್ನು ನಂಬಿ ಶಾಸಕನೊಬ್ಬ ಅಧಿವೇಶನದ ನಡುವೆಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಶಾಸಕನನ್ನು ಕೆಳಗಿಳಿಸಿ ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರೂ ಮಾರ್ಗ ಮಧ್ಯಯೇ ಸಾವನ್ನಪ್ಪಿದ್ದಾರೆ.
ಶಾಸಕರ
ಆತ್ಮಹತ್ಯೆ
ಪ್ರಕರಣದಿಂದ
ಉದ್ರಿಕ್ತ
ವಾತಾವರಣ
ನಿರ್ಮಾಣಗೊಂಡಿದ್ದು
ಇತರ
ಶಾಸಕರು
ರಾಜ್ಯ
ಹೆದ್ದಾರಿಯಲ್ಲಿ
ಟೈರ್ಗಳನ್ನು
ಸುಟ್ಟು
ಪ್ರತಿಭಟನೆ
ನಡೆಸಿದರು.
ರೈತ
ಸಂಘಟನೆಗಳ
ರಾಜ್ಯ
ಮುಖಂಡರು
ಬಂದು
ಪರಿಹಾರ
ನೀಡುವವರೆಗೂ
ಸ್ಥಳ
ಬಿಟ್ಟು
ಕದಲುವುದಿಲ್ಲ
ಎಂದು
ಪಟ್ಟು
ಹಿಡಿದು
ಕುಳಿತರು.
[ಒಂದು
ಪ್ಲೇಟ್
ಭೇಲ್
ಪುರಿಯ
ಬೆಲೆ
ಎಷ್ಟು?
ಇವತ್ತೇ
ತಿನ್ನಿ!]
ಪ್ರತಿಭಟನಾನಿರತ ಶಾಸಕರು ಮೃತ ಶಾಸಕರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡದೇ ಪ್ರತಿಭಟನೆಯನ್ನು ಮುಂದುವರಿಸಿದರು. ನಂತರ ಸ್ಥಳಕ್ಕೆ ಬಂದ ಸ್ಥಳೀಯ ರೈತ ಮುಖಂಡನ ಬೈಕ್ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಬೇಕಾಯಿತು. [ಕನ್ಯಾ ಏನ ಗಿಡದಾಗ ಹುಟ್ಟತಾವ? ಮತ್ತಿನ್ನೇನ! ಬೇಕೇನ?]
ಜಿಲ್ಲಾ ರೈತ ಸೇನೆಯ ಮುಖಂಡ ನಗುವಿನಹಳ್ಳಿಬಾಳಪ್ಪ ಸ್ಥಳಕ್ಕೆ ಬಂದು ಪ್ರತಿಭಟನಾ ನಿರತ ಶಾಸಕರೊಂದಿಗೆ ಮಾತುಕತೆ ನಡೆಸಿದರು. ವೈಯುಕ್ತಿಕವಾಗಿ ಮೃತ ಶಾಸಕನ ಕುಟುಂಬಕ್ಕೆ 501 ರೂ. ಗಳನ್ನು ನೀಡುತ್ತಿದ್ದು ಮುಂದೆ ರೈತ ಸಂಘಟನೆಗಳ ಪರವಾಗಿ ಇನ್ನೂ ಹೆಚ್ಚಿನ ಮೊತ್ತ ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು ಅವರು 100 ರೂ. ಚೆಕ್ ಅನ್ನು ಪರಿಹಾರ ರೂಪದಲ್ಲಿ ನೀಡಲು ಮುಂದಾದಾಗ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಕಬ್ಬುಬೆಳೆಗಾರರ ಸಂಘದ ಮುಖಂಡ ಮಲ್ಲಪ್ಪ ಬೆಲ್ಲದ, ಮೃತ ಶಾಸಕನ ಕುಟುಂಬಕ್ಕೆ ಸಾಂತ್ವನ ಹೇಳಿ ಸ್ಥಳದಲ್ಲಿಯೇ 250 ರೂ.ಪರಿಹಾರವನ್ನು ನೀಡಿದರು.
ಮೃತ ಶಾಸಕರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೈಕಮಾಂಡ್ ಆದೇಶದಂತೆ ಜಿಲ್ಲೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಸುಮಾರು 80 ಕೋಟಿ ಖರ್ಚು ಮಾಡಿದ್ದರು. ಇದೇ ಉದ್ದೇಶಕ್ಕಾಗಿ ಬೇರೆ-ಬೇರೆ ಬ್ಯಾಂಕ್ ಗಳಲ್ಲಿ ಸುಮಾರು 55 ಲಕ್ಷ ರೂ.ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಅತೀ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಮಂತ್ರಿಗಿರಿ ನೀಡುವುದಾಗಿ ಹೈಕಮಾಂಡ್ ಹೇಳಿತ್ತು. ಆದರೆ, ಚುನಾವಣೆಯ ನಂತರ ಮಂತ್ರಿಗಿರಿ ಬಗ್ಗೆ ಪಕ್ಷ ಮೌನವಹಿತ್ತು. ಇದರಿಂದ ಶಾಸರು ಖಿನ್ನರಾಗಿದ್ದರು ಎಂದು ಸಮೀಪವರ್ತಿಗಳು ಹೇಳಿದ್ದಾರೆ.
ಸೂಚನೆ : ಈ ಸುದ್ದಿಯು ಕೇವಲ ಕಾಲ್ಪನಿಕವಾಗಿದ್ದು ನಮ್ಮ ದೇಶದಲ್ಲಿ ಈ ರೀತಿಯ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷವೇ ಆಗಿರುತ್ತದೆ. ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ